ಉಪ್ಪಿನಂಗಡಿ : ಸರ್ಕಾರಿಪದವಿ ಪೂರ್ವ ಕಾಲೇಜುನಲ್ಲಿ ಡಾ||ಬಿ.ಆರ್ ಅಂಬೇಡ್ಕರ್ ಜನ್ಮದಿನಾಚರಣೆ

0

ಪುತ್ತೂರು: ದಿನಾಂಕ 14.04.2022ರಂದು ಸಂವಿಧಾನ ಶಿಲ್ಪಿ ಡಾ||ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನಾಚರಣೆಯನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿ ಇಲ್ಲಿ ಬೋಧಕ ಮತ್ತು ಬೋಧಕೇತರ ವೃಂದ ಹಾಗೂ ಅಕ್ಷರ ದಾಸೋಹ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳೊಂದಿಗೆ ಆಚರಿಸಲಾಯಿತು

ಉಪಪ್ರಾಂಶುಪಾಲರಾದ  ಶ್ರೀಧರ್ ಭಟ್ ರವರು ಸಂವಿಧಾನದ ಪೂರ್ವಪೀಠಿಕೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.ಲಕ್ಷ್ಮೀಶ್ ನಾಯ್ಕ  ಕನ್ನಡ ಶಿಕ್ಷಕರು ದಿನದ ಮಹತ್ವವನ್ನು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಕಾರ್ಯಾಧ್ಯಕ್ಷರಾದ   ಉಮೇಶ್ ಶೆಣೈ ವಹಿಸಿದ್ದರು.  ಶೋಭಾ ಸ್ವಾಗತಿಸಿ,  ದೇವಕಿ ವಂದಿಸಿದರು. ಸುಮಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here