ನೆಲ್ಯಾಡಿ: ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಇಚ್ಲಂಪಾಡಿ-ಬೀಡು ಶ್ರೀ ಉಳ್ಳಾಕ್ಲು ಸಹ-ಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀ ಉಳ್ಳಾಕ್ಲು ಸಹ-ಪರಿವಾರ ದೈವಗಳ ವರ್ಷಾವಧಿ ಜಾತ್ರೋತ್ಸವ, ನೇಮೋತ್ಸವ ಎ.16 ಮತ್ತು 17 ರಂದು ನಡೆಯಲಿದೆ.
ಎ.9ರಂದು ಕುಂತೂರು ಗ್ರಾಮದ ಮಣಿಕ್ಕಳದ ಶ್ರೀ ಉಳ್ಳಾಕ್ಲು ಕ್ಷೇತ್ರದಿಂದ ಗೊನೆ ತಂದು ಎ.10ರಂದು ಬೆಳಿಗ್ಗೆ ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗೊನೆ ಮುಹೂರ್ತದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಎ.14ರಂದು ಬೆಳಿಗ್ಗೆ ಉಳ್ಳಾಕ್ಲು ಮಾಡದಲ್ಲಿ ದೇವತಾ ಪ್ರಾರ್ಥನೆ, ಪುಣ್ಯಾಹ ವಾಚನ, ಗಣಪತಿ ಹೋಮ, ಕಲಶಪೂಜೆ, ದೈವಗಳಿಗೆ ತಂಬಿಲ ನಡೆದು ಸಂಜೆ ರಂಗಪೂಜೆ, ಧ್ವಜಾರೋಹಣ ನಂತರ ಭಂಡಾರ ತೆಗೆದು ಕುದುರೆಮುಖ ಮತ್ತು ಉದ್ರಾಂಡಿ ದೈವಗಳ ನೇಮ, ಎ.15ರಂದು ಬಿಸು ಕಾಣಿಕೆ ನಡೆಯಿತು.
ಎ.೧೬ರಂದು ಮಧ್ಯಾಹ್ನ ಶ್ರೀ ಉಳ್ಳಾಕ್ಲು ದೈವಕ್ಕೆ ಎಣ್ಣೆ ವೀಳ್ಯ ಕೊಡುವುದು ನಂತರ ನೇಮೋತ್ಸವ, ಎ.17ರಂದು ಮಧ್ಯಾಹ್ನ ಶ್ರೀ ಹಳ್ಳತ್ತಾಯ ದೈವಕ್ಕೆ ಎಣ್ಣೆ ವೀಳ್ಯ ಕೊಡುವುದು ನಂತರ ನೇಮೋತ್ಸವ, ಶ್ರೀ ಪನ್ಯಾಡಿತ್ತಾಯ, ಪೊಟ್ಟ ದೈವಗಳ ನೇಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.