ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಭಜನಾ ವಾರ್ಷಿಕೋತ್ಸವ

0

ಕಾಣಿಯೂರು: ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 40ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು 43ನೇ ವರ್ಷದ ಭಜನಾ ವಾರ್ಷಿಕೋತ್ಸವ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಉಪಾಧ್ಯಾಯ ಬೊಬ್ಬೆಕೇರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು. ಬೆಳಿಗ್ಗೆ ಗಣಹೋಮ, ನಾಗತಂಬಿಲ, ಶ್ರೀ ಕಲ್ಲುರ್ಟಿ ತಂಬಿಲ ನಡೆದು, ಬಳಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ರಾತ್ರಿ ಭಜನಾ ಕಾರ್ಯಕ್ರಮ, ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶೀಯ ಮೊಕ್ತೇಸರರಾದ ಹರಿಯಪ್ಪ ಗೌಡ ನಾವೂರು, ಆಡಳಿತ ಸಮಿತಿ ಅಧ್ಯಕ್ಷ ನಾಗೇಶ್ ರೈ ಮಾಳಗುತ್ತು, ಮೊಕ್ತೇಸರರಾದ ಪುಟ್ಟಣ್ಣ ಗೌಡ ಪೈಕ, ಜಯಪ್ರಸಾದ್ ರೈ ಕುಂಡುಳಿ, ವಿವೇಕ್ ನಿಡ್ಡಾಜೆ, ಭಾಸ್ಕರ ಗೌಡ ಮುರುಳ್ಯ, ಕೃಷ್ಣಪ್ಪ ಗೌಡ ಬೀರ್ನೇಲು, ಸದಾನಂದ ರೈ ಮಾಲೇಂಗ್ರಿ, ಕಾರ್ಯದರ್ಶಿ ದಿನೇಶ್ ಮಾಳ, ಕೋಶಾಧಿಕಾರಿ ಪುನಿತ್ ಬಂಡಾಜೆ, ಜತೆ ಕಾರ್ಯದರ್ಶಿ ಅನಂತ್ ಬೈಲಂಗಡಿ, ನಾವೂರು ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿಯ ಗೌರವಾಧ್ಯಕ್ಷ ಜಯರಾಮ ಗೌಡ ಬಂಡಾಜೆ, ಅಧ್ಯಕ್ಷ ರವಿಶಂಕರ್ ಎನ್.ಟಿ, ಕಾರ್ಯದರ್ಶಿ ದಿವೀಶ್ ನಾವೂರು, ಉಪಾಧ್ಯಕ್ಷರಾದ ಸಂದೀಪ್ ನಾವೂರು, ಕೋಶಾಧಿಕಾರಿ ಸುನಿಲ್ ಕುಂಡುಳಿ, ಜತೆ ಕಾರ್ಯದರ್ಶಿ ಸತ್ಯಾನಂದ ನಾವೂರು ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here