ಪಳ್ಳತ್ತಾರು ಶಾಲೆಯ ವಿವಿಧ ಕಾಮಗಾರಿಗಳ ಉದ್ಘಾಟನೆ, ಸನ್ಮಾನ ಕಾರ್ಯಕ್ರಮ

0

ಕಾಣಿಯೂರು: ಬೆಳಂದೂರು ಗ್ರಾಮದ ದ.ಕ.ಜಿ.ಪಂ.ಸ.ಹಿ.ಪ್ರಾಥಮಿಕ ಶಾಲೆ ಪಳ್ಳತ್ತಾರಿನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಇದರ ವತಿಯಿಂದ ಶಾಲೆಗೆ ಸುಮಾರು ಒಂದು ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಚಿನ್ನರ ಬಾಲವನವನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಇದರ ದ.ಕ ಜಿಲ್ಲಾಧ್ಯಕ್ಷ ಮುಹಮ್ಮದ್ ಹಾಜಿ ಕುಕ್ಕುವಳ್ಳಿ ಉದ್ಘಾಟಿಸಿದರು.ನರೇಗಾ ಯೋಜನೆಯಡಿ ಸುಮಾರು 4 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಆವರಣಾ ಗೋಡೆಯನ್ನು ಬೆಳಂದೂರು ಪಂಚಾಯತ್ ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ಉದ್ಘಾಟಿಸಿದರು.ತಾಲೂಕು ಪಂಚಾಯತ್ ಅನುದಾನದಲ್ಲಿ ನಿರ್ಮಿಸಿರುವ ಶೌಚಾಲಯವನ್ನು ಬೆಳಂದೂರು ಪಂಚಾಯತ್ ಉಪಾಧ್ಯಕ್ಷೆ ತೇಜಾಕ್ಷಿ ಕೊಡಂಗೆ ಉದ್ಘಾಟಿಸಿದರು.

ಬಳಿಕ ಬೆಳಂದೂರು ಪಂಚಾಯತ್ ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.ಶಾಲಾ ಮುಖ್ಯಗುರುಗಳಾದ ರಂಗನಾಥ್ ಸ್ವಾಗತಿಸಿದರು.ಶಿಕ್ಷಕರಾದ ಕುಶಾಲಪ್ಪ ರವರು ಪ್ರಾಸ್ತಾವಿಕ ‌ಭಾಷಣ ಮಾಡಿದರು.ಲೋಹಿತಾಕ್ಷ ಕೆಡೆಂಜಿಕಟ್ಟ,ತೇಜಾಕ್ಷಿ ಕೊಡಂಗೆ,ಕರುಣಾಕರ ಪೂಜಾರಿ ಪಟ್ಟೆ, ಮುಹಮ್ಮದ್ ಹಾಜಿ ಕುಕ್ಕುವಳ್ಳಿ,ಉನೈಸ್ ಪೆರಾಜೆ,ಜಲೀಲ್ ಬೈತಡ್ಕ ಸುಪ್ರಿತ್ ಕುಮಾರ್ ಶುಭಹಾರೈಸಿದರು.

ಸನ್ಮಾನ ಕಾರ್ಯಕ್ರಮ

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಇದರ ದ‌.ಕ ಜಿಲ್ಲಾಧ್ಯಕ್ಷ ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲಾಧ್ಯಕ್ಷ ಉನೈಸ್ ಪೆರಾಜೆ,ದ.ಕ ಜಿಲ್ಲಾ ಕಾರ್ಯಾಧ್ಯಕ್ಷ ಜಲೀಲ್ ಬೈತಡ್ಕ ಇವರನ್ನು ಎಸ್ ಡಿ ಎಂ ಸಿ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಉಮ್ಮರ್ ಶಾಫಿ,ಬೆಳಂದೂರು ಪಂಚಾಯತ್ ಸದಸ್ಯರಾದ ಹರಿಣಾಕ್ಷಿ,ಜಯರಾಮ,ಉಮೇಶ್ವರಿ ಅಗಳಿ,ಪಂಚಾಯತ್ ಮಾಜಿ ಅಧ್ಯಕ್ಷ ನಝೀರ್ ದೇವಸ್ಯ,ನರೇಗಾ ಇಂಜಿನಿಯರ್ ಮನೋಜ್ ಕುಮಾರ್,ಬೆಳಂದೂರು ಪಂಚಾಯತ್ ಪಿ ಡಿ ಓ ನಾರಾಯಣ,ಶ್ರೀಧರ ಗೌಡ ಬನಾರಿ,ಯುವರಾಜ ಬನಾರಿ,ರಾಜೇಶ ಬನಾರಿ,ನವಾಝ್ ಸಖಾಫಿ ಸೇರಿದಂತೆ ಶಾಲಾ ಶಿಕ್ಷಕರು,ಎಸ್ ಡಿ ಎಂ ಸಿ ಪದಾಧಿಕಾರಿಗಳು,ಅಡುಗೆ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.ಭಾಗವಹಿಸಿದ ಎಲ್ಲ ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.ಶಿಕ್ಷಕಿ ಝರೀನಾ ಕಾರ್ಯಕ್ರಮ ನಿರೂಪಿಸಿ, ಸರೋಜ ವಂದಿಸಿದರು.

LEAVE A REPLY

Please enter your comment!
Please enter your name here