ಬೈಕ್‌ ಅಪಘಾತ: ಚಿಕಿತ್ಸೆಯಲ್ಲಿದ್ದ  ಬೀತಾಲಪ್ಪು ನಿವಾಸಿ ಮೃತ್ಯು

0

ಉಪ್ಪಿನಂಡಿ: ಬೈಕ್‌ ಹಾಗೂ ಕಾರು  ಅಪಘಾತದಲ್ಲಿ ಗಂಭೀರ ಗಾಯಗೊಂಡು  ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ   34- ನೆಕ್ಕಿಲಾಡಿಯ ಬೀತಾಲಪು  ನಿವಾಸಿ ವರ್ಷಿತ್ (17) ಚಿಕಿತ್ಸೆ ಫಲಕಾರಿಯಾಗದೆ   ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಎ.16ರಂದು ಸಂಜೆ  34೪- ನೆಕ್ಕಿಲಾಡಿಯ   ಗ್ರಾಮದ   ಬೇರಿಕೆಯಲ್ಲಿ   ಕಾರು ಮತ್ತು ಬೈಕ್‌ ನಡುವೆ  ಮುಖಾಮುಖಿ ಅಪಘಾತ ನಡೆದಿತ್ತು. ಈ ಸಂದರ್ಭ ಬೈಕ್‌ ಸವಾರ ಬೆಳ್ಳಿಪಾಡಿ ಗ್ರಾಮದ ನೆಕ್ಕರೆ ನಿವಾಸಿ ಅಶ್ವತ್‌ (17) ಸ್ಥಳದಲ್ಲಿ   ಮೃತಪಟ್ಟಿದ್ದು,  ಸಹಸವಾರನಾಗಿದ್ದ  ವರ್ಷಿತ್ ಗಂಭೀರ ಗಾಯಗೊಂಡು ಜೀವನ್ಮ‌ರಣ ಸ್ಥಿತಿಯಲ್ಲಿ ಅಸ್ಪತ್ರಗೆ ದಾಖಲಾಗಿದ್ದರು. ಇಂದು ಬೆಳಗ್ಗೆ  ಚಿಕಿತ್ಸೆ  ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಬೀತಾಲಪ್ಪುವಿನ ಕುಂದರ  ಹಾಗೂ ಬಬಿತ ದಂಪತಿಗೆ ಇವರು ಒಬ್ಬನೇ  ಮಗನಾಗಿದ್ದು ಇವರನ್ನು ಕಳೆದು ಕೊಂಡ ಕುಟುಂಬವಿಗ ಶೋಕ  ಸಾಗರದಲ್ಲಿ  ಮುಳುಗಿದೆ. 

LEAVE A REPLY

Please enter your comment!
Please enter your name here