ಪುತ್ತೂರು; ಸುಮಾರು 500 ವರ್ಷಗಳ ಇತಿಹಾಸವಿರುವ ಮುಂಡೂರು ಉದಯಗಿರಿ ಶ್ರೀವಿಷ್ಣುಮೂರ್ತಿ ದೈವ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಅಷ್ಟಮಂಗಲ ಪ್ರಸ್ನಾ ಚಿಂತನೆಯಲ್ಲಿ ಕಂಡು ಬಂದಂತೆ ವಿಷ್ಣುಮೂರ್ತಿ ದೈವಸ್ಥಾನ, ಗುಳಿಗನ ಕಟ್ಟೆ, ಕಚೇರಿ, ಕಾಂಪೌಂಡ್ ಮೊದಲಾದ ಕಾಮಗಾರಿಗಳಿಗೆ ಎ.23ರಂದು ಶಿಲಾನ್ಯಾಸ ನೆರವೇರಿತು.
ಡಾ.ಹರಿಕೃಷ್ಣ ಪಾಣಾಜೆಯವರು ಶಿಲಾನ್ಯಾಸ ನೆರವೇರಿಸಿದರು. ದೈವಸ್ಥಾನದ ಆಡಳಿತ ಮಂಡಲಿ ಅಧ್ಯಕ್ಷ ಭಾಸ್ಕರ ಆಚಾರ್ ಹಿಂದಾರ್, ಕಾರ್ಯದರ್ಶಿ ಸದಾಶಿವ ಶೆಟ್ಟಿ ಪಟ್ಟೆ, ಸಮಿತಿ ಸದಸ್ಯರಾದ ಅರುಣ್ ಕುಮಾರ್ ಪುತ್ತಿಲ, ಈಶ್ವರ ನಾಯ್ಕ, ಹುಕ್ರ ಮಾಸ್ತರ್, ಮುರಳಿಧರ ಭಟ್ ಬಂಗಾರಡ್ಕ, ಸುಧೀರ್ ಶೆಟ್ಟಿ ನೇಸರ, ಬಾಲಕೃಷ್ಣ ಶೆಟ್ಟಿ ಪಂಜಳ, ಪ್ರಮುಖರಾದ ರಘುನಾಥ ಶೆಟ್ಟಿ, ಅನಿಲ್ ಕನ್ನರ್ ನೂಜಿ, ಶೇಷಪ್ಪ ಆಚಾರ್ಯ, ಮೋಹನ ನಾಯ್ಕ,ಧನಂಜಯ,ದೇವದಾಸ ಕುರಿಯ, ಚಂದ್ರಹಾಸ, ಶಿವಪ್ಪ ಪೂಜಾರಿ ಮುಲಾರ್, ಹರೀಶ್ ಉದಯಗಿರಿ ಮೊದಲಾದವರು ಉಪಸ್ಥಿತರಿದ್ದರು.