ನೆಲ್ಯಾಡಿ: ಕಡಬ ತಾಲೂಕು ಆಲಂತಾಯ ಗ್ರಾಮದ ಕೆರೆಮೇಲು ನಿವಾಸಿ ಮೋನಪ್ಪ ಗೌಡ(78ವ.)ರವರು ಅನಾರೋಗ್ಯದಿಂದ ಎ.28 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಮೃತರು ಕೃಷಿಕರಾಗಿದ್ದು ಪಾಲೇರಿ ರಾಜನ್ ದೈವದ ಪರಿಚಾರಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ ಸೇಸಮ್ಮ, ಪುತ್ರರಾದ ಚಂದ್ರಶೇಖರ, ಕುಶಾಲಪ್ಪ, ಪುತ್ರಿ ಮೀನಾಕ್ಷಿ, ಮೊಮ್ಮಗ ಪ್ರಸಾದ್ರನ್ನು ಅಗಲಿದ್ದಾರೆ. ಮೃತರ ಮನೆಗೆ ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ಗೋಳಿತ್ತೊಟ್ಟು ಗ್ರಾ.ಪಂ.ಮಾಜಿ ಅಧ್ಯಕ್ಷ ಪೂವಪ್ಪ ಕರ್ಕೇರ, ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ ಸೇರಿದಂತೆ ಹಲವು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.