ಕನ್ನಡ ಚಲನಚಿತ್ರವೊಂದರಲ್ಲಿ ಮಿಂಚಲಿದ್ದಾರೆ ಪುತ್ತೂರಿನ ಹುಡುಗಿ ‘ವಾಮನ’ ಸಿನೆಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ರಚನಾ.ರೈ

0

ಪುತ್ತೂರು: ಪುತ್ತೂರಿನ ಹುಡುಗಿ ರಚನಾ.ರೈ ಕನ್ನಡದ ಹೊಸ ಸಿನೆಮಾವೊಂದರಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸುದ್ದಿಯಲ್ಲಿದ್ದಾರೆ.ಬಹಳ ನಿರೀಕ್ಷೆ ಮೂಡಿಸಿರುವ ‘ಚಿಕನ್ ಪುಲಿಯೋಗರೆ’ ಹಾಗೂ ‘ಸರ್ಕಸ್’ ತುಳು ಸಿನೆಮಾ‌ ನಟನೆಯ ಬಳಿಕ ಸ್ಯಾಂಡಲ್ ವುಡ್ ನ ಸ್ಟಾರ್ ನಟ ಧನ್ವೀರ್ ನಾಯಕ ನಟರಾಗಿರುವ ‘ವಾಮನ’ ಸಿನೆಮಾದಲ್ಲಿ ಕಾಣಿಸಿಕೊಳ್ಳತ್ತಿದ್ದಾರೆ.
ಹಾರಾಡಿ ಶಾಲಾ ಶಿಕ್ಷಕಿಯಾಗಿರುವ ಗಂಗಾ.ರೈ ಹಾಗೂ ಪ್ರವೀಣ್ ದಂಪತಿಗಳ ಪುತ್ರಿಯಾಗಿರುವ ರಚನಾ.ರೈ,ಎಸ್.ಡಿ.ಎಂ ಉಜಿರೆಯಲ್ಲಿ ಪಿಯುಸಿ ವರೆಗಿನ ಶಿಕ್ಷಣವನ್ನು ಹಾಗೂ ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದಾರೆ. ಮಾಡೆಲಿಂಗ್‌ನಲ್ಲಿ ಭಾಗವಿಸುತ್ತಿದ್ದ ಈಕೆ ಶ್ವಾನಗಳ ಕುರಿತಾಗಿ ‘ಓ ಮೈ ಡಾಗ್’ ಎಂಬ ಪುಸ್ತಕವನ್ನು ಬರೆದಿದ್ದಾರೆ.ಹೀಗೆ ಸಕಲಕಲಾವಲ್ಲಭೆಯಾಗಿ ಮಿಂಚುತ್ತಿರುವ ಈಕೆಗೆ ‘ವಾಮನ’ ಸಿನೆಮಾ ತನ್ನ ಸಿನಿ ಜರ್ನಿಯಲ್ಲಿ ಹೊಸಮೈಲುಗಲ್ಲಾಗಲಿದೆ ಎಂಬುದು ರಚನಾ.ರೈ ಅಭಿಪ್ರಾಯಪಟ್ಟಿದ್ದಾರೆ

 

LEAVE A REPLY

Please enter your comment!
Please enter your name here