ಕಡಬ: ಸಭೆಗೆ ಎಲ್ಲಾ ಸದಸ್ಯರು ಗೈರು: ನಡೆಯದ ಐತ್ತೂರು ಗ್ರಾ.ಪಂ.ಸಾಮಾನ್ಯ ಸಭೆ

0

  • ಅಧ್ಯಕ್ಷರ ಏಕಪಕ್ಷಿಯ ನಿರ್ಧಾರ ಆರೋಪ

ಕಡಬ: ಐತ್ತೂರು ಗ್ರಾ.ಪಂ.ಸಾಮಾನ್ಯ ಸಭೆಗೆ ಅಧ್ಯಕ್ಷರನ್ನು ಹೊರತುಪಡಿಸಿ ಉಳಿದ 10 ಮಂದಿ ಸದಸ್ಯರು ಗೈರು ಹಾಜರಾಗಿದ್ದು ಈ ಹಿನ್ನೆಲೆಯಲ್ಲಿ ನಿಗದಿಯಾಗಿದ್ದ ಪಂಚಾಯತ್ ಸಾಮಾನ್ಯ ಸಭೆ ರದ್ದಾಗಿರುವ ಘಟನೆ ಏ.30 ರಂದು ನಡೆದಿದೆ. ಸಭೆಯು ಇಂದು ನಿಗದಿಯಾಗಿದ್ದು ಅಧ್ಯಕ್ಷೆ ಶ್ಯಾಮಲ ಅವರು ಹಾಜರಾಗಿದ್ದು ಉಳಿದ 10 ಮಂದಿ ಸದಸ್ಯರು ಸಭೆಗೆ ಹಾಜರಾಗಲಿಲ್ಲ. ಸದಸ್ಯರ ಈ ಗೈರು ಹಾಜರಿಗೆ ಅಧ್ಯಕ್ಷರ ಏಕ ಪಕ್ಷಿಯ ನಿರ್ಧಾರವೇ ಕಾರಣ ಎಂದು ಸದಸ್ಯರಿಂದ ಪ್ರತಿಕ್ರಿಯೆ ಬಂದಿದೆ.

ಅಧ್ಯಕ್ಷರ ಏಕಪಕ್ಷಿಯ ನಿರ್ಧಾರ: ರೋಹಿತ್ ಉಪಾಧ್ಯಕ್ಷರ ಆರೋಪ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಂಚಾಯತ್ ಉಪಾಧ್ಯಕ್ಷ ರೋಹಿತ್ ಅವರು, ಅಧ್ಯಕ್ಷರು ಸದಸ್ಯರನ್ನು ಯಾವುದೇ ಕೆಲಸ ಕಾರ್ಯಗಳಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಖುತ್ತಿಲ್ಲ, ಅವರೇ ಏಕ ಪಕ್ಷಿಯ ತಿರ್ಮಾನ ತೆಗೆದುಕೊಳ್ಳುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ನಾವು ನಾನು ಹಾಗೂ ಇತರ ಸದಸ್ಯರು ಗೈರು ಹಾಜರಾಗಿದ್ದೇವೆ ಎಂದು ಹೇಳಿದ್ದಾರೆ.

ಕೊರಂ ಕೊರತೆ ಸಭೆ ರದ್ದು: ಶ್ಯಾಮಲ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷೆ ಶ್ಯಾಮಲ ಅವರು ಸದಸ್ಯರು ಯಾಕೆ ಬರಲಿಲ್ಲ ಎಂದು ನನಗೆ ಗೊತ್ತಿಲ್ಲ, ಓರ್ವ ಸದಸ್ಯರು ಬರಲು ಅಸಾಧ್ಯವಾಗಿರುವ ಬಗ್ಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಸದಸ್ಯರು ಬಾರದೆ ಕೋರಂ ಕೊರತೆ ಯಾಗಿರುವ ಹಿನ್ನೆಲೆಯಲ್ಲಿ ಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

LEAVE A REPLY

Please enter your comment!
Please enter your name here