ಕಡಬ: ಇಲ್ಲಿನ ಐತ್ತೂರು ಸಮೀಪ ವಾಹನಕ್ಕೆ ದಾರಿ ಕೊಡದ ವಿಚಾರದಲ್ಲಿ ಯಾತ್ರಾರ್ಥಿಗಳು ಮತ್ತು ಯುವಕರ ನಡುವೆ ಮಾತಿನ ಚಕಮಕಿ ನಡೆದು ನಡುವೆ ಹೊಯ್ಕೈ ನಡೆದಿದೆ.
ಮೇ.10 ರಂದು ಕಲ್ಲಾಜೆ ಬಳಿ ಸಾಯಂಕಾಲದ ವೇಳೆ ಈ ಘಟನೆ ನೆಡೆದಿದ್ದು ಮಾಹಿತಿ ತಿಳಿದು ಹೆಚ್ಚು ಜನರು ಜಮಾಯಿಸಿದ್ದರು. ಯಾತ್ರಾರ್ಥಿಗಳಿದ್ದ ಬಸ್ ವಿರುದ್ಧ ದಿಕ್ಕಿನಿಂದ ವೇಗವಾಗಿ ಬಂದರೆಂಬ ಕಾರಣಕ್ಕೆ ಸೈಡ್ ಕೊಡುವ ವಿಚಾರವಾಗಿ ಕಾರೊಂದರಲ್ಲಿದ್ದ ಕೊಂಬಾರು ಭಾಗದ ಯುವಕರು ವಾಗ್ವಾದ ಮಾಡಿದ್ದಾರೆ ಎನ್ನಲಾಗಿದೆ. ಕಡಬ ಪೊಲೀಸರ ಮದ್ಯ ಪ್ರವೇಶದಿಂದ ಈ ಪ್ರಕರಣ ಮಾತುಕತೆಯಲ್ಲಿ ಸುಖಾಂತ್ಯಗೊಂಡಿದೆ .