ಪುತ್ತೂರು: ಶಾಸಕ ಸಂಜೀವ ಮಠಂದೂರುರವರು ಶಾಸಕರಾಗಿ ಜಯಗಳಿಸಿದ ಹಿನ್ನೆಲೆಯಲ್ಲಿ ಪಿಡಬ್ಲ್ಯುಡಿ ಗುತ್ತಿಗೆದಾರ ಅಪ್ಪಣ್ಣ ನಾಯ್ಕ ಕಟೀಲ್ತಡ್ಕ ಮತ್ತು ಸಂಜೀವ ಮಠಂದೂರು ಅಭಿಮಾನಿ ಬಳಗದ ವತಿಯಿಂದ ಬೆಟ್ಟಂಪಾಡಿ ದೇವಿಕೃಪಾ ಮನೆಯಲ್ಲಿ ಕಲ್ಲುರ್ಟಿ ಹಾಗೂ ಮಂತ್ರದೇವತೆಯ ನೇಮೋತ್ಸವ ಮೇ 16 ರಂದು ನಡೆಯಲಿದೆ.
ಸಂಜೆ ದುರ್ಗಾಪೂಜೆ, ಬಳಿಕ ಭಂಡಾರ ತೆಗೆದು ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಕಲ್ಲುರ್ಟಿ ಮತ್ತು ಮಂತ್ರದೇವತೆ ದೈವಗಳ ನೇಮೋತ್ಸವ ಜರಗಲಿದೆ ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.