ಕೊಡಿಪ್ಪಾಡಿ ನಂದನ ಶ್ರೀನಾಗಬ್ರಹ್ಮ ಸಪರಿವಾರ ದೈವಗಳ ಸಾನಿಧ್ಯದಲ್ಲಿ ಶ್ರೀನಾಗಬಿಂಬ ಪ್ರತಿಷ್ಠೆ ದೈವಗಳ ಪ್ರತಿಷ್ಠೆ

0

ಪುತ್ತೂರು : ಕೊಡಿಪ್ಪಾಡಿ ನಂದನ ಶ್ರೀನಾಗಬ್ರಹ್ಮ ಮತ್ತು ಸಪರಿವಾರ ದೈವಗಳ ಸಾನಿಧ್ಯದಲ್ಲಿ ಶ್ರೀನಾಗಬಿಂಬ ಪ್ರತಿಷ್ಠೆ ಮತ್ತು ದೈವಗಳ ಶಿಲಾ ಪ್ರತಿಷ್ಠೆ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಮೇ24 ಮತ್ತು 25ರಂದು ನಡೆಯಿತು.


ಮೇ.24ರಂದು ಸಂಜೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ನೂತನ ಬಿಂಬ ಜಲಾಧಿವಾಸ, ಪ್ರಸಾದ ವಿತರಣೆ ನಡೆಯಿತು. ಮೇ25ರಂದು ಬೆಳಿಗ್ಗೆ 6ರಿಂದ ಮಹಾಗಣಪತಿ ಹೋಮ, ಕಲಶ ಪೂಜೆ, ಪ್ರತಿಷ್ಠಾ ಹೋಮ, ಶ್ರೀನಾಗಶಿಲಾ ಪ್ರತಿಷ್ಠೆ, ದೈವಗಳ ಪ್ರತಿಷ್ಠೆ, ಆಶ್ಲೇಷಾ ಬಲಿ, ವಟು ಆರಾಧನೆ, ಕಲಶಾಭಿಷೇಕ, ತಂಬಿಲ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಮಿತಿ ಅಧ್ಯಕ್ಷರು ಹಾಗೂ ಊರ ಹತ್ತು ಸಮಸ್ತರು, ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here