ಮೇ.28- ಪುತ್ತೂರು ಬಂಟರ ಭವನದಲ್ಲಿ ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಯುವ ಬಂಟೆರೆ ಆಯನ -2022

0

ಪುತ್ತೂರು: ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ ಇವರ ಮಾರ್ಗದರ್ಶನದಲ್ಲಿ ಬಂಟರ ಸಂಘ ಪುತ್ತೂರು ತಾಲೂಕು ಮತ್ತು ಮಹಿಳಾ ಹಾಗೂ ವಿದ್ಯಾರ್ಥಿ ಬಂಟರ ಸಂಘ ಪುತ್ತೂರು ತಾಲೂಕು ಇದರ ಸಹಕಾರದೊಂದಿಗೆ ಮೇ. 28 ರಂದು ಪುತ್ತೂರು ಕೊಂಬೆಟ್ಟು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಯುವ ಬಂಟೆರೆ ಆಯನ- 2022 ಕಾರ್‍ಯಕ್ರಮ ನಡೆಯಲಿದೆ. ಪೂರ್ವಹ್ನ 5.30 ರಿಂದ ಗಣಹೋಮ, 6.30 ರಿಂದ ಶ್ರೀ ಸತ್ಯನಾರಾಯಣ ಪೂಜೆ, 9 ರಿಂದ ಉಪಹಾರ, ಬೆಳಿಗ್ಗೆ 9.30 ರಿಂದ ಬಂಟ ಕಲಾ ವೈಭವ ಸ್ವರ್ಧೆ ನಡೆಯಲಿದೆ.

ಬಂಟ ಕಲಾ ವೈಭವ ಸ್ವರ್ಧೆಯಲ್ಲಿ ಭಾಗವಹಿಸುವ ತಂಡಗಳು

ಪುತ್ತೂರ್ದ ಮುತ್ತು (ಪುತ್ತೂರು ನಗರ) ನೇತ್ರಾವತಿ (ಉಪ್ಪಿನಂಗಡಿ) ಕದಂಬ(ಸವಣೂರು) ಕುಮಾರಧಾರ(ಪಾಣಾಜೆ) ಹಾಗೂ ಸತ್ಯದ ಸಿರಿ(ನೆಟ್ಟಣಿಗೆ ಮುಡ್ನೂರು) ತಂಡಗಳು ಬಂಟ ಕಲಾ ವೈಭವ ಸ್ವರ್ಧೆಯಲ್ಲಿ ಭಾಗವಹಿಸಲಿದೆ.

ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಗೌರವ
2019-20, 2020-21, 2021-22ಸಾಲಿನ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕೋತ್ತರ ಪದವಿ ಪಡೆದವರನ್ನು ಕಾರ್‍ಯಕ್ರಮದಲ್ಲಿ ಗೌರವಿಸಲಾಗುವುದು.

ಬಂಟ ಸ್ಮೃತಿ ಕಾರ್‍ಯಕ್ರಮ

ಕೆದಂಬಾಡಿ ಜತ್ತಪ್ಪ ರೈ( ಮೃಗಯ ಸಾಹಿತಿ) ಮಿತ್ತಳಿಕೆ ಅಮ್ಮು ಶೆಟ್ಟಿ( ಪುತ್ತೂರು ತಾಲೂಕು ಬಂಟರ ಸಂಘದ ಸ್ಥಾಪಕಾಧ್ಯಕ್ಷರು) ಕಾವು ಅಂತಪ್ಪ ಶೆಟ್ಟ( ರಾಜಕೀಯ ಸೇವೆ) ಆನಾಜೆ ಗಣೇಶ್ ರೈ(ಪುತ್ತೂರು ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ) ಹಾಗೂ ಕುದ್ಕಾಡಿ ವಿಶ್ವನಾಥ ರೈ(ಕಲಾ ಸೇವೆ)ರವರುಗಳು ಸ್ಮೃತಿ ಕಾರ್‍ಯಕ್ರಮ ನಡೆಯಲಿದೆ.

ಸಭಾ ಕಾರ್‍ಯಕ್ರಮ
ಮಧ್ಯಾಹ್ನ 12.30 ರಿಂದ ಸಭಾ ಕಾರ್‍ಯಕ್ರಮ ನಡೆಯಲಿದ್ದು, ಉದ್ಘಾಟನೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿರವರು ನೇರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಪುತ್ತೂರು ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ ಮುಂಡಾಲಗುತ್ತುರವರು ವಹಿಸಲಿದ್ದಾರೆ. ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಯ ಡೆಪ್ಯೂಟಿ ಡೈರೆಕ್ಟರ್ ಕ್ಲಿನಿಕಲ್‌ನ ಡಾ.ಬೆಳ್ಳಿಪ್ಪಾಡಿ ಶ್ಯಾಮ್ ಪ್ರಸಾದ್ ಶೆಟ್ಟಿರವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಸ್ವಾತಕೋತರ ಪದವಿ ಪಡೆದವರನ್ನು ಅಭಿನಂದಿಸುವ ಕಾರ್‍ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತುರವರು ಬಂಟ ಕಲಾ ವೈಭವವನ್ನು ಉದ್ಘಾಟಿಸಲಿದ್ದಾರೆ. ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕ ಕುಂಬ್ರ ದುರ್ಗಾಪ್ರಸಾದ್ ರೈರವರು ಬಂಟ ಸ್ಮೃತಿ ಮಾಡಲಿದ್ದಾರೆ. ಪುತ್ತೂರು ತಾಲೂಕು ಯುವ ಬಂಟರ ಸಂಘದ ನಿಕಟಪೂರ್ವಧ್ಯಕ್ಷ ಪ್ರಕಾಶ್ ರೈ ಸಾರಕರೆ, ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ತಾಲೂಕು ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪವನ್ ಶೆಟ್ಟಿ ಕಂಬಳತ್ತಡ್ಡರವರು ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ ಎಂದು ಪುತ್ತೂರು ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ ಮುಂಡಾಲಗುತ್ತು, ಪ್ರಧಾನ ಕಾರ್‍ಯದರ್ಶಿ ಪ್ರಜ್ವಲ್ ರೈ, ಕೋಶಾಧಿಕಾರಿ ಕೆ.ಸಿ..ಅಶೋಕ್ ಶೆಟ್ಟಿ, ಯುವ ಬಂಟೆರೆ ಅಯನ -2022 ಕಾರ್‍ಯಕ್ರಮದ ಪ್ರಧಾನ ಸಂಚಾಲಕರುಗಳಾದ ಬೊಳಿಂಜಗುತ್ತು ರವಿಪ್ರಸಾದ್ ಶೆಟ್ಟಿ ಬನ್ನೂರು ಹಾಗೂ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆರವರು ತಿಳಿಸಿದ್ದಾರೆ

LEAVE A REPLY

Please enter your comment!
Please enter your name here