ಪುತ್ತೂರು : ಬಂಟ್ವಾಳ ಪೆರ್ನೆ ಕಡಂಬು ನಿವಾಸಿ ಕಾಷ್ಠಶಿಲ್ಪಿ ವೆಂಕಪ್ಪ ಆಚಾರ್ಯ ರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಕಡಂಬು ಮನೆಯಲ್ಲಿ ನಡೆಯಿತು. ಬಜಪೆ ಬಾಲಚಂದ್ರ ಪುರೋಹಿತ್ರವರು ನುಡಿನಮನ ಸಲ್ಲಿಸಿದರು. ದಿ.ವೆಂಕಪ್ಪ ಆಚಾರ್ಯರವರ ಪುತ್ರರಾದ ಸದಾಶಿವ ಆಚಾರ್ಯ, ರೋಹಿತ್ ಆಚಾರ್ಯ, ಸಂತೋಷ್ ಆಚಾರ್ಯ, ಪುತ್ರಿ ವನಿತಾ ಹಾಗೂ ಕುಟುಂಬಸ್ಥರು, ಬಂಧುಮಿತ್ರರು ಉಪಸ್ಥಿತರಿದ್ದರು.