ಕಾವು: ಮುದರ್ಪಳ್ಳ ನಿವಾಸಿ ಪ್ರಗತಿಪರ ಕೃಷಿಕ ಆದೂರು ಏಳ್ನಾಡ್ ಗುತ್ತು ಬಾಲಕೃಷ್ಣ ರೈ (70 ವರ್ಷ) ಇವರು ಅಲ್ಪ ಕಾಲದ ಅಸೌಖ್ಯ ದಿಂದ ಸ್ವಗೃಹ ದಲ್ಲಿ ಮೇ. 28 ರಂದು ನಿಧನರಾದರು.
ಮೃತರು ಪತ್ನಿ ಲಲಿತಾ ಬಿ ರೈ, ಪುತ್ರಿ ಮಮತಾ ಬಿ ಶೆಟ್ಟಿ ಮತ್ತು ಅಳಿಯ ಬಾಲಚಂದ್ರ ಶೆಟ್ಟಿ ಸೊರಕೆ ಹಾಗೂ ಪುತ್ರ ಮನೋಜ್ ರೈ ಮತ್ತು ಸೊಸೆ ಸತ್ಯ. ಎಂ. ರೈ, ಮೊಮ್ಮಕ್ಕಳು, ಹಾಗೂ ಕುಟುಂಬಸ್ತರು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದರು.