ಪುತ್ತೂರು: ಶ್ರೀ ರಾಮಕೃಷ್ಣ ಪ್ರೌಢಶಾಲೆ, ಪುತ್ತೂರು ಇಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುವಮ್ಮ ಕೆ ಯವರು ಮೇ.31 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಪುತ್ತೂರು ತಾಲೂಕಿನ ಕಸಬಾ ಗ್ರಾಮದ ಕರ್ಮಲ ಹುಕ್ರಪ್ಪ ಹಾಗೂ ಚೆನ್ನಮ್ಮ ದಂಪತಿಗಳ ಪುತ್ರಿಯಾಗಿ 1962 ರಲ್ಲಿ ಜನಿಸಿದ ಸುವಮ್ಮ ಕೆ ಯವರು ಪ್ರಥಮಿಕ ಶಿಕ್ಷಣವನ್ನು ಬೊಳುವಾರು ಶಾಲೆಯಲ್ಲಿ, ಪ್ರೌಢಶಿಕ್ಷಣವನ್ನು ಕೊಂಬೆಟ್ಟು ಹಾಗೂ ಪದವಿಪೂರ್ವ ಶಿಕ್ಷಣವನ್ನು ವಿವೇಕಾನಂದ ಕಾಲೇಜು ಇಲ್ಲಿ ಪೂರೈಸಿ, ಆಗಸ್ಟ್ 01, 1986 ರಂದು ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕರ್ತವ್ಯ ಆರಂಭಿಸಿದರು. 35 ವರ್ಷ 10ತಿಂಗಳುಗಳ ಸುದೀರ್ಘ ಕಾಲ ಸೇವೆಗೈದು ಸರಕಾರಿ ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ.
ಪ್ರಸ್ತುತ ಮಗಳು ಪುತ್ತೂರು ತಾಲೂಕು ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿರುವ ಅನುಪಮಾ ಪಿ.ಎಸ್., ಅಳಿಯ ಬಾಲಚಂದ್ರ ಡಿ ಹಾಗೂ ಮೊಮ್ಮಕ್ಕಳಾದ ಸಾನ್ವಿ ಮತ್ತು ಮನ್ವಿತ್ ರೊಂದಿಗೆ ಕರ್ಮಲದಲ್ಲಿ ಸುಖೀ ಸಂಸಾರ ನಡೆಸುತ್ತಿದ್ದಾರೆ.