![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಮುಂಡೂರು ವಲಯ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆ ಮೇ.30ರಂದು ಕಾಂಗ್ರೆಸ್ ಹಿರಿಯ ಮುಖಂಡ ಇಬ್ರಾಹಿಂ ಮುಲಾರ್ರವರ ನಿವಾಸದಲ್ಲಿ ನಡೆಯಿತು. ವಲಯ ಕಾಂಗ್ರೆಸ್ ಅಧ್ಯಕ್ಷ ಸುಪ್ರೀತ್ ಕಣ್ಣಾರಾಯ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ನಾಯಕರಾದ ಸುರೇಶ್ ಕುಮಾರ್ ಸೊರಕೆ, ಯಾಕೂಬ್ ಮುಲಾರ್, ಮಹಾಲಿಂಗ ನಾಯ್ಕ, ಮಹೇಶ್ಚಂದ್ರ ಸಾಲಿಯಾನ್, ಮುಂಡೂರು ಗ್ರಾ.ಪಂ ಸದಸ್ಯರಾದ ಬಾಬು ಕಲ್ಲಗುಡ್ಡೆ ಹಾಗೂ ಸುನಂದ, ಅಣ್ಣಿ ಪೂಜಾರಿ, ಪದ್ಮಯ್ಯ ನಾಯ್ಕ ಬಂಡಿಕಾನ, ಜಗದೀಶ್ ಬದಿಯಡ್ಕ, ಸುಲೈಮಾನ್ ಮುಲಾರ್, ಗಣೇಶ್ ಸಾಲಿಯಾನ್ ಪಜಿಮಣ್ಣು ಮತ್ತಿತರ ಹಲವರು ಉಪಸ್ಥಿತರಿದ್ದರು.