ರಾಮಕುಂಜ: ಶ್ರಿ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಇಟಾಲಿಕ್ ಕೈ ಬರಹ ತರಬೇತಿ ವಿಚಾರವಾಗಿ ನಿವೃತ್ತ ಪ್ರಾಂಶುಪಾಲ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿ ದುಗ್ಗಪ್ಪ ಗೌಡ ಅವರು ಕಾರ್ಯಾಗಾರವನ್ನು ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ಇಟಾಲಿಕ್ ಬರವಣಿಗೆಯ ಅಭ್ಯಾಸ ಪುಸ್ತಕವನ್ನು ನೀಡಿ, ಇಟಾಲಿಕ್ ಬರಹದ ಹಿನ್ನಲೆ, ಔಚಿತ್ಯ, ವಿಧಾನಗಳನ್ನು ಕಥೆಗಳ ಮೂಲಕ ವಿವರಿಸಿದರು. ಕಾರ್ಯಾಕ್ರಮಕ್ಕೆ ಆಂಗ್ಲಭಾಷಾ ಉಪನ್ಯಾಸಕ ಪ್ರವೀಣ್ ಕುಮಾರ್, ಸಹಶಿಕ್ಷಕರಾದ ಅನುಷಾ ಎ., ಮತ್ತು ಪ್ರವೀಣ್ರವರು ಸಹಕರಿಸಿದರು. ಶಾಲಾ ಮುಖ್ಯಶಿಕ್ಷಕ ಸತೀಶ್ ಭಟ್ರವರು ಉಪಸ್ಥಿತರಿದ್ದರು.