ಜೂ.12: ಬಿಲ್ಲವ ನಗರ ಸಮಿತಿಯ ಮಹಾಸಭೆ, ಪುಸ್ತಕ ವಿತರಣೆ, ಸನ್ಮಾನ – ಅರ್ಜಿ ಆಹ್ವಾನ

0

ಪುತ್ತೂರು: ಬಿಲ್ಲವ ಸಂಘದ ಪುತ್ತೂರು ನಗರ ಸಮಿತಿಯ ವಾರ್ಷಿಕ ಮಹಾಸಭೆ, ಉಚಿತ ಪುಸ್ತಕ ವಿತರಣೆ ಹಾಗೂ ಎಸ್‌ಎಸ್‌ಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.85 ಮತ್ತು ಅದಕ್ಕಿಂತ ಮೇಲ್ಪಟ್ಟು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಜೂ.12ರಂದು ನಡೆಯಲಿದೆ. ಉಚಿತ ಪುಸ್ತಕ ಹಾಗೂ ಸನ್ಮಾನ ಸ್ವೀಕರಿಸುವ ಅರ್ಹ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಜೂ.8ರ ಒಳಗೆ ಅರ್ಜಿ ಸಲ್ಲಿಸಲು ತಾಲೂಕು ಬಿಲ್ಲವ ಸಂಘದ ಕಛೇರಿಯನ್ನು ಸಂಪರ್ಕಿಸಬೇಕು. ಹೆಚ್ಚಿನ ಮಾಹಿತಿಗಾಗಿ 9108750499 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here