ಕಾಣಿಯೂರು:ದ.ಕ.ಜಿ.ಪಂ.ಹಿ.ಪ್ರಾಥಮಿಕ ಶಾಲೆ ಪಳ್ಳತ್ತಾರಿನಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ಆವರಣದ ಸುತ್ತಲೂ ಅಡಿಕೆ ಗಿಡ ನೆಡುವ ಕಾರ್ಯಕ್ರಮಕ್ಕೆ ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ತೇಜಾಕ್ಷಿ ಕೊಡಂಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಉಮ್ಮರ್ ಶಾಫಿ,ಶಾಲಾ ಮುಖ್ಯಗುರು ಸೀತಾರಾಮ ಕೆ ಜಿ, ಶಿಕ್ಷಕರಾದ ರಂಗನಾಥ,ಕುಶಾಲಪ್ಪ ಗೌಡ, ಶಿಕ್ಷಕಿಯರಾದ ಸರೋಜ,ಝರೀನಾ, ಬೆಳಂದೂರು ಪಂ.ಮಾಜಿ ಅಧ್ಯಕ್ಷ ನಝೀರ್ ದೇವಸ್ಯ, ಎಸ್ ಡಿ ಎಂ ಸಿ ಸದಸ್ಯರಾದ ನವಾಝ್ ಸಖಾಫಿ,ಅಬೂಬಕ್ಕರ್ ಫಾಳಿಲಿ,ಚಂದ್ರಶೇಖರ ಆಚಾರ್ಯ, ಇಬ್ರಾಹಿಂ ದಫ್,ಪೋಷಕರಾದ ಅಝೀಝ್ ಅಂಜದಿ,ಅಡುಗೆ ಸಿಬ್ಬಂದಿ ಸರೋಜಿನಿ ಮೊದಲಾದವರು ಉಪಸ್ಥಿತರಿದ್ದರು.ಸುಪ್ರೀತ್ ಕುಮಾರ್ ಜೈನ್ ಅವರು ಸುಮಾರು 50ರಷ್ಟು ಅಡಿಕೆ ಗಿಡಗಳನ್ನು ಕೊಡುಗೆಯಾಗಿ ನೀಡಿದರು.