ಪುತ್ತೂರು:ಪುತ್ತೂರು ತಾಲೂಕು ಹಾಗೂ ದ.ಕ ಜಿಲ್ಲಾದ್ಯಂತ ಕಳೆದ ೨೦ ವರ್ಷಗಳಿಂದ ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವ “ದ್ವಾರಕಾ ಕನ್ಸ್ಟ್ರಕ್ಷನ್ಸ್” ನ ಸಹ ಸಂಸ್ಥೆಯಾಗಿ ‘ದ್ವಾರಕಾ ಸಿಮೆಂಟ್ ಪ್ರೋಡಕ್ಟ್’ ಎಂಬ ಸಂಸ್ಥೆಯು ಪುತ್ತೂರಿನ ಒಳಮೊಗರು ಗ್ರಾಮದ ಕುಂಬ್ರ ಕೊಯಿಲತ್ತಡ್ಕದಲ್ಲಿ ಜೂ 9 ರಂದು ಉದ್ಘಾಟನೆಗೊಂಡಿತು. ವೇದಮೂರ್ತಿ ಕೃಷ್ಣಕುಮಾರ ಉಪದ್ಯಾಯರವರು ವೈದಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ರೀಫಾ ಸಿಮೆಂಟ್ ಬ್ಲಾಕ್ ನ ಮಾಲಕರಾದ ಮುಹ್ಮಮದ್ ಆರಿಫ್ ರವರು ಸಿಮೆಂಟ್ ಉತ್ಪನಗಳ ಪ್ರಾತ್ಯಕ್ಷೀಕೆಯನ್ನು ನಡೆಸಿಕೊಟ್ಟರ. ದ್ವಾರಕಾ ಕನ್ಸ್ಟ್ರಕ್ಷನ್ಮಾಲಕರಾದ ಗೋಪಾಲಕೃಷ್ಣ ಭಟ್ ರವರು ಮಾತನಾಡಿ ನಮ್ಮಲ್ಲಿ ಸಿಮೆಂಟ್ ಬ್ಲಾಕ್ ಗಳು,ಇಂಟರ್ ಲಾಕ್ ಗಳು ಹಾಗೂ ರೆಡಿ ಮೇಡ್ ಕಂಪೌಂಡ್, ಮುಂತಾದ ಉತ್ಪನಗಳು ಲಭ್ಯವಿದ್ದು ಕ್ಲಪ್ತ ಸಮಯಕ್ಕೆ ವಿಶ್ವಾಸರ್ಹ ಸೇವೆ ನಮ್ಮ ಧೈಯ ಎಂದು ತಿಳಿಸಿದರು .ಸಂಸ್ಥೆಯ ವ್ಯವಸ್ಥಾಪಕರದ ಅಮೃತ ಕೃಷ್ಣನವರು ಎಲ್ಲರನ್ನು ಸ್ವಾಗತಿಸಿ ವಂದಿಸಿದರು.ಅಮೃತ ಶಾನ್ ಭಾಗ್ ಅಶ್ವಿನಿ ಗೋಪಾಲ ಕೃಷ್ಣ ಭಟ್ ಹರಿಕೃಷ್ಣ ಭಟ್ ಅರ್ತ್ಯಡ್ಕ ಮುಂತಾದವರು ಉಪಸ್ಥಿತರಿದ್ದರು.