ಪುತ್ತೂರು: ಪುತ್ತೂರು ವಲಯ ಅರಣ್ಯ ಇಲಾಖೆಯ ವತಿಯಿಂದ ಜೂ.19 ರಂದು ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಯ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ(ಸಿಎಲ್ ಸಿ)ಯ ಸದಸ್ಯರಿಗೆ ಹಣ್ಣು ಹಂಪಲುಗಳ ಗಿಡಗಳನ್ನು ವಿತರಿಸುವ ಮೂಲಕ ವನಮಹೋತ್ಸವವನ್ನು ಆಚರಿಸಲಾಯಿತು.
ಸಿಎಲ್ ಸಿ ಅಧ್ಯಕ್ಷ ಜೋಯೆಲ್ ಕುಟಿನ್ಹಾರವರು ಸದಸ್ಯರಿಗೆ ರಂಬುಟಾನ್, ಪುನರ್ಪುಳಿ, ನೆಲ್ಲಿಕಾಯಿ, ಸೀತಾಫಲ, ಪೇರಳೆ, ಲಿಚ್ಚಿ ಹಣ್ಣು ಮುಂತಾದ ಸುಮಾರು 50 ಗಿಡಗಳನ್ನು ವಿತರಿಸಿದರು. ಸಿಎಲ್ ಸಿ ಕಾರ್ಯದರ್ಶಿ ವಿಲಿಯಂ ನೊರೋನ್ಹಾ, ಉಪಾಧ್ಯಕ್ಷ ಸುಜಿತ್ ಪಾಯಿಸ್, ಕೋಶಾಧಿಕಾರಿ ನರೇಶ್ ಲೋಬೊ, ಹೊತೆ ಕಾರ್ಯದರ್ಶಿ ರುಡೋಲ್ಫ್ ಪಿಂಟೋ ಸಹಿತ ಸದಸ್ಯರು ಉಪಸ್ಥಿತರಿದ್ದರು.