ಸರ್ವೆ: ಕಲ್ಪಣೆಯಲ್ಲಿ ಧ.ಗ್ರಾ.ಯೋಜನೆ ಎ ಒಕ್ಕೂಟದ ತ್ರೈ ಮಾಸಿಕ ಸಭೆ-ಬೀಳ್ಕೊಡುಗೆ ಸನ್ಮಾನ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸರ್ವೆ ಎ ಒಕ್ಕೂಟದ ತ್ರೈಮಾಸಿಕ ಸಭೆ ಕಲ್ಪಣೆ ಮೊಗೇರ ಸಮುದಾಯ ಭವನದಲ್ಲಿ ಒಕ್ಕೂಟದ ಅಧ್ಯಕ್ಷ ಸುಂದರ ಬಲ್ಯಾಯರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸರ್ವೆ ಕಾರ್ಯಕ್ಷೇತ್ರದಿಂದ ಬೇರೆ ಕಾರ್ಯಕ್ಷೇತ್ರಕ್ಕೆ ವರ್ಗಾವಣೆಯಾದ ಸೇವಾ ಪ್ರತಿನಿಧಿ ಚಿತ್ರ ಅವರನ್ನು ಅಭಿನಂದಿಸಿ ಬೀಳ್ಕೊಡಲಾಯಿತು. ಕಾರ್ಯಕ್ರಮದಲ್ಲಿ ಕೆಮ್ಮಿಂಜೆ ವಲಯದ ಮೇಲ್ವಿಚಾರಕಿ ಮೋಹಿನಿ ಗೌಡ ಸಂಘದ ಹಾಗೂ ಒಕ್ಕೂಟದ ಬಗ್ಗೆ ಮಾಹಿತಿ ನೀಡಿದರು. ಸೇವಾ ಪ್ರತಿನಿಧಿ ರೇಖಾ ರೈ ಉಪಸ್ಥಿತರಿದ್ದರು. ಸವಿತಾ ಒಕ್ಕೂಟದ ವರದಿ ವಾಚಿಸಿದರು. ಕಾಮಧೇನು ತಂಡ ಕಾರ್ಯಕ್ರಮದ ಜವಾಬ್ದಾರಿ ವಹಿಸಿತ್ತು. ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾಮಧೇನು ತಂಡದ ಉಮಾವತಿ ಸ್ವಾಗತಿಸಿದರು. ಹರಿಣಾಕ್ಷಿ ವಂದಿಸಿದರು.

LEAVE A REPLY

Please enter your comment!
Please enter your name here