ಶೀಘ್ರದಲ್ಲಿ ಸುದ್ದಿ ಯೂಟ್ಯೂಬ್, ಚಾನೆಲ್‌ನಲ್ಲಿ… ಸುಂದರ್ ರೈ ಮಂದಾರ ನಿರ್ದೇಶನದ `ಪೂರಿ ಬಾಜಿ’-ಚಿತ್ರೀಕರಣ ಆರಂಭ

0

ಪುತ್ತೂರು: `ಅಂಬರ ಮರ್ಲೆರ್’ ಖ್ಯಾತಿಯ ಬಳಿಕ ಇದೀಗ ಸುದ್ದಿ ಮೀಡಿಯಾ ನಿರ್ಮಾಣದಲ್ಲಿ ರಂಗಭೂಮಿ ಕಲಾವಿದ, ನಿರ್ದೇಶಕ ಸುಂದರ್ ರೈ ಮಂದಾರ ನಿರ್ದೇಶನದ ಮತ್ತೊಂದು ಹಾಸ್ಯ ಧಾರಾವಾಹಿ ನಿರ್ಮಾಣವಾಗುತ್ತಿದೆ. ಸುಂದರ ರೈ ಮಂದಾರ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ `ಪೂರಿ ಬಾಜಿ’ ಹಾಸ್ಯ ಧಾರಾವಾಹಿ ಚಿತ್ರೀಕರಣಕ್ಕೆ ಜೂ.25 ರಂದು ಮುಹೂರ್ತ ನಡೆಯಿತು. ಬನ್ನೂರು ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ಮೋಹನ ಪಕಳ ಅವರ ಮನೆ ಬೆಳ್ಳಿಪ್ಪಾಡಿ ಕುಂಡಾಪುವಿನಲ್ಲಿ ಚಿತ್ರೀಕರಣ ನಡೆಯಿತು. ಸುದ್ದಿ ಮೀಡಿಯಾ ನಿರ್ಮಾಣದಲ್ಲಿ ಮೂಡಿಬರಲಿರುವ ಧಾರಾವಾಹಿಗೆ ಸುಧಾಕರ್ ಪಡೀಲ್ ಮತ್ತು ಧನು ಪುತ್ತೂರು ಛಾಯಾಗ್ರಹಣ, ಸಮದ್ ಕುರಿಯರವರ ಧ್ವನಿ ಮತ್ತು ಬೆಳಕು ಇರಲಿದೆ. ಜಿಲ್ಲೆಯ ಸಿನಿಮಾ,ರಂಗಭೂಮಿಯ ಕಲಾವಿದರು ಸೇರಿದಂತೆ ಸ್ಥಳೀಯ ಪ್ರತಿಭೆಗಳು ಕೂಡ ಧಾರಾವಾಹಿಯಲ್ಲಿ ಪಾತ್ರ ನಿರ್ವಹಿಸಲಿದ್ದಾರೆ. ಚಿತ್ರೀಕರಣದಲ್ಲಿ ಮುಹೂರ್ತ ಸಂದರ್ಭದಲ್ಲಿ ಚಂದ್ರಹಾಸ ಶೆಟ್ಟಿ ಮಾಣಿ, ಸುಂದರ ರೈ ಮಂದಾರ, ಕು.ಸುರಕ್ಷಾ, ಮೋಹನ್ ಪಕ್ಕಳ, ನಿತಿನ್ ಮೆಲ್ಕಾರ್, ಜ್ಯೂ.ಬೋಳಾರ್ ಕಾಂಚನ, ಪ್ರಸಾದ್ ಆತೂರು, ಪ್ರಮೀಳ ಮೋಹನ ಪಕ್ಕಳ. ಪ್ರತಿಜ್ಞಾ ಪಕ್ಕಳ, ಬೇಬಿ, ಸುಧಾಕರ್ ಪಡೀಲು ಸಮದ್ ಕುರಿಯ, ಧನು ರೈ, ಪ್ರಸಾದ್ ಕೊಯಿಲ, ವಿನಯ್  ಕುಮಾರ್ ಭಂಡಾಡಿ ಭಾಗವಹಿಸಿದ್ದರು. ಜೂ.25 ರಂದು ಪುತ್ತೂರು ತೆಂಕಿಲ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಸದ್ಯದಲ್ಲೇ ಪುತ್ತೂರಿನ ನಂ.1 ಯೂಟ್ಯೂಬ್ ಚಾನೆಲ್ ಸುದ್ದಿ ಮೀಡಿಯಾ ಹಾಗೂ ಸುದ್ದಿ ಕೇಬಲ್ ಚಾನೆಲ್‌ನಲ್ಲಿ ಧಾರಾವಾಹಿ ಪ್ರಸಾರಗೊಳ್ಳಲಿದೆ ಎಂದು ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲಾವಿದರ ಗಮನಕ್ಕೆ: ಪೂರಿಬಾಜಿ ತುಳು ಹಾಸ್ಯ ಧಾರಾವಾಹಿಯಲ್ಲಿ ಅಭಿನಯಿಸಲು ಆಸಕ್ತಿಯಿರುವ ಕಲಾವಿದರು 9980202308ಕ್ಕೆ ಸಂಪರ್ಕಿಸುವಂತೆ ನಿರ್ದೇಶಕ ಸುಂದರ ರೈ ಮಂದಾರ ಹೇಳಿದ್ದಾರೆ.

LEAVE A REPLY

Please enter your comment!
Please enter your name here