ಪುತ್ತೂರು: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ96ನೇ ಸ್ಥಾಪನಾ ದಿನಾಚರಣೆ ಕೂಡುರಸ್ತೆ ಅಲ್ ರಿಫಾಯಿಯ್ಯ ಮದ್ರಸ ವಠಾರದಲ್ಲಿ ನಡೆಯಿತು. ಜಮಾಅತ್ ಗೌರವಾಧ್ಯಕ್ಷ ಮಾಹಿನ್ ಹಾಜಿ ಬಾಳಾಯ ಧ್ವಜಾರೋಹಣ ನೆರವೇರಿಸಿದರು.
ಪಾಜಪಳ್ಳ ಮಸೀದಿ ಖತೀಬ್ ಯಾಸಿರ್ ಅರಾಫತ್ ಕೌಸರಿ ಹಾಗೂ ರಿಫಾಯಿಯ್ಯ ಯೂತ್ ಫೆಡರೇಶನ್ ಅಧ್ಯಕ್ಷ ಮಜೀದ್ ಬಾಳಾಯ ಸಂದೇಶ ಭಾಷಣ ಮಾಡಿದರು. ಖತೀಬ್ ಜಲೀಲ್ ದಾರಿಮಿ ಪ್ರಾರ್ಥನೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಜಮಾಅತ್ ಉಪಾಧ್ಯಕ್ಷ ಉಮರ್ ಬಾಳಾಯ, ಪ್ರ.ಕಾರ್ಯದರ್ಶಿ ಸಿದ್ದೀಕ್ ಸುಲ್ತಾನ್, ಕಾರ್ಯದರ್ಶಿ ಇಬ್ರಾಹಿಂ ಮುಸ್ಲಿಯಾರ್, ಹಿರಿಯರಾದ ಯೂಸುಫ್ ಹಾಜಿ ಬಾಳಾಯ, ಯಂಗ್ಮೆನ್ಸ್ ಪ್ರಮುಖರಾದ ಹಾರಿಸ್ ದರ್ಬೆ, ಶರೀಫ್ ಅಜ್ಜಿಕಲ್ಲು, ಇಸ್ಮಾಯಿಲ್ ಸುಲ್ತಾನ್, ನೌಫಲ್ ಅಜ್ಜಿಕಲ್ಲು, ಅಝರುದ್ದೀನ್ ಕೂಡುರಸ್ತೆ, ಇಕ್ಬಾಲ್ ಮುಸ್ಲಿಯಾರ್, ಇಬ್ರಾಹಿಂ ನಾಡಾಜೆ, ನಿಝಾಂ ಬಾಳಾಯ ಹಾಗೂ ಎಸ್ಕೆಎಸ್ಬಿವಿ ವಿದ್ಯಾರ್ಥಿ ನಾಯಕರು, ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು..