ವಿಟ್ಲ: ಬಿಲ್ಲವ ಸಂಘದ ಬೆಳ್ಳಿಹಬ್ಬದ ಸಂಭ್ರಮೋತ್ಸವ ಸಮಿತಿ ವತಿಯಿಂದ 5 ನೇ ಸೇವಾ ಕಾರ್ಯಕ್ರಮ ಅನಿಲಕಟ್ಟೆ ಹಿ. ಪ್ರಾ ಶಾಲೆಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಯಿತು. ಸಮಿತಿ ವತಿಯಿಂದ ನಡೆಯಲಿರುವ 25 ಕಾರ್ಯಕ್ರಮಗಳಲ್ಲಿ ಇದೂ ಒಂದಾಗಿದೆ.
ಬಿಲ್ಲವ ಸಂಘದ ಅಧ್ಯಕ್ಷರಾದ ಹರೀಶ್ ಸಿ ಎಚ್. ಬೆಳ್ಳಿಹಬ್ಬದ ಸಮಿತಿಯ ಅಧ್ಯಕ್ಷರಾದ ಡಾಕ್ಟರ್ ಗೀತಾಪ್ರಕಾಶ್ ಎ., ಬ್ರಹ್ಮಶ್ರೀ ಸಹಕಾರಿ ಸಂಘದ ಅಧ್ಯಕ್ಷರಾದ ಸಂಜೀವ ಪೂಜಾರಿ ಎನ್, ಪಟ್ಟಣ ಪಂಚಾಯತ್ ಸದಸ್ಯರಾದ ಅಶೋಕ್ ಕುಮಾರ್ ಶೆಟ್ಟಿ , ಚಂದ್ರಹಾಸ ಸುವರ್ಣ, ರಾಜೇಶ್ ವಿಟ್ಲ, ಜಯಂತ್ ಪೂರ್ಲಪ್ಪಾಡಿ, ಈಶ್ವರ ಭಟ್ ಬದನಾಜೆ, ಗಂಗಾಧರ ಗೌಡ ಪೂರ್ಲಪ್ಪಾಡಿ, ಲಕ್ಷ್ಮಣ ಪೂಜಾರಿ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ನವೀನ್ ಕೆ, ಶಾಲಾ ಮುಖ್ಯ ಶಿಕ್ಷಕಿ ಯಮುನಾ ದಾಮೋದರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.