ಶಿವಕುಮಾರ್ ನಿಡ್ಪಳ್ಳಿ ನಿಧನ

0

ನಿಡ್ಪಳ್ಳಿ; ಇಲ್ಲಿಯ ಬರೆಂಬೊಟ್ಟು ನಿವಾಸಿ ದಿ.ನಾರಾಯಣ ಗೌಡರ ಪುತ್ರ ಶಿವಕುಮಾರ್ (32) ಎಂಬವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಜೂ.28 ರಂದು ನಿಧನರಾದರು.
ಮಂಗಳೂರು ಉಲ್ಲಾಸ್ ಐಸ್ ಕ್ರಿಂ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಸುಪರ್ ವೈಸರ್  ಉದ್ಯೋಗಿಯಾದ ಇವರು ಮೂರು ದಿನಗಳ ಹಿಂದೆ ಜ್ವರದಿಂದ ಬಳಲುತ್ತಿದ್ದು ವಿಶ್ರಾಂತಿಗಾಗಿ  ಮನೆಗೆ ಬಂದಿದ್ದರು. ಜ್ವರ ಕಡಿಮೆಯಾದರೂ ಮತ್ತೆ  ವಿಪರೀತ ಅನಾರೋಗ್ಯಕ್ಕೀಡಾದ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿ ನಿಧನರಾದರು.
ಮೃತರು ತಾಯಿ ವಿಶಾಲಾಕ್ಷಿ, ಸಹೋದರ ಸುದೀರ್ ಕುಮಾರ್ ಹಾಗೂ ಸಹೋದರಿ ಭವ್ಯರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here