ನಿಡ್ಪಳ್ಳಿ;ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಒಡ್ಯ ಇಲ್ಲಿ ಶ್ರೀದೇವಿ ಭಜನಾ ಮಂಡಳಿ ಸುಂದರ ಗಿರಿ,ಬಾಳೆ ಮೂಲೆ ಇವರ ವತಿಯಿಂದ ಜೂ.26 ರಂದು ಶ್ರಮದಾನದ ಮೂಲಕ ಶಾಲಾಸ್ವಚ್ಛತೆ,ತೆಂಗಿನ ಸಸಿಗಳಿಗೆ ಸೊಪ್ಪುಮತ್ತು ಕೋಳಿ ಗೊಬ್ಬರಹಾಕುವುದು,ಮೆಶಿನ ಮೂಲಕ ಶಾಲಾ ಮೈದಾನದ ಹುಲ್ಲು ತೆಗೆಯುವಿಕೆ, ,ಶಾಲಾ ಬೋರ್ ವೆಲ್ ಮೀಟರ್ ಬಾಕ್ಸ್ ಗೆ ಪೈಟಿಂಗ್ ಮೊದಲಾದ ಕೆಲಸ ಕಾರ್ಯಗಳು ನಡೆಯಿತು. ಮಂಡಳಿ ಅಧ್ಯಕ್ಷರಾದ ಗಣೇಶ್ ನಾಯ್ಕ ಒಡ್ಯ ಮತ್ತು ಪದಾಧಿಕಾರಿಗಳು ಶ್ರಮದಾನದಲ್ಲಿ ಭಾಗವಹಿಸಿದರು. ಮುಖ್ಯ ಗುರು ಜನಾರ್ದನ ಅಲ್ಚಾರು, ಎಸ್.ಡಿ.ಎಂ.ಸಿ.ಅಧ್ಯಕ್ಷ ದೇವಪ್ಪ ನಾಯ್ಕ, ಶಿಕ್ಷಕ ಉಸ್ಮಾನ್ ಮಂಚಿ ಉಪಸ್ಥಿತರಿದ್ದರು.