ಕಡಬ: ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿದ ಯೋಧ, ಬಿಳಿನೆಲೆ ಗ್ರಾಮದ ನೆಟ್ಟಣ ಮೇರೋಂಜಿ ನಿವಾಸಿ ಪ್ರಭಾಕರ ಎಂ. ಜೂ.30ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.
ಇವರು 2005ರಲ್ಲಿ ಭಾರತೀಯ ಸೇನೆಗೆ ಸೇರಿದ್ದು ಅರುಣಾಚಲ, ಜಮ್ಮು ಕಾಶ್ಮಿರ, ಮೀರನ್ ಸಾಹೇಬ್ ಪೂಂಛ್ ಸೆಕ್ಟರ್, ದೇಹಲಿ, ಪಂಜಾಬ್, ನೌವ್ಶರ ಸರ್ಜಿಕಲ್ ಸ್ಟ್ರೈಕ್, ಇನ್ಸ್ ಸೆಕ್ಟರ್ ಎಂ.ಆರ್.ಸಿ. ಊಟಿ ಟ್ರೈನಿಂಗ್ ಸೆಂಟರ್, ಅಸ್ಸಾಂ, ಹಾಗೂ ಜಮ್ಮು ಕಾಶ್ಮಿರದಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಊಟಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಜೂ.೩೦ರಂದು ನಿವೃತ್ತಿ ಹೊಂದಿದ್ದಾರೆ.
ಪ್ರಭಾಕರ ಎಂ. ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿಳಿನೆಲೆ, ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಬಿಳಿನೆಲೆ, ಸುಬ್ರಹ್ಮಣ್ಯೇಶ್ವರ ಪ.ಪೂ.ಕಾಲೇಜು ಸುಬ್ರಹ್ಮಣ್ಯದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಇವರು ಬಿಳಿನೆಲೆ ಗ್ರಾಮದ ನೆಟ್ಟಣ ಮೆರೋಂಜಿ ನಿವಾಸಿ ರೇಗಪ್ಪ ಗೌಡ, ಪಾರ್ವತಿ ದಂಪತಿಯ ಪುತ್ರನಾಗಿದ್ದು, ಪತ್ನಿ ವೈಶಾಲಿ ಪಿ.ಎಸ್. ಮಕ್ಕಳು ವಂಶಿ, ಲಹಸ್ಯ ಇದ್ದಾರೆ.