ಪುತ್ತೂರು: ಭಾರೀ ಮಳೆಗೆ ಎಪಿಎಂಸಿ ರಸ್ತೆಯ ಕಿರು ಸೇತುವೆ ಮೋರಿ ಹೂಳು ತುಂಬಿ ಬ್ಲಾಕ್ ಆಗಿದ್ದು ಕೃತಕ ನೆರೆ ಉಂಟಾದ ಘಟನೆ ನಡೆದಿದೆ. ತೋಡಿನ ನೀರು ಸರಾಗವಾಗಿ ಹರಿಯಲು ಎಪಿಎಂಸಿ ರಸ್ತೆಯ ಕಿರು ಸೇತುವೆಯ ಮೋರಿಯಲ್ಲಿ ಹೂಳು ತುಂಬಿದ ಹಿನ್ನಲೆಯಲ್ಲಿ ಪರಿಸರದಲ್ಲಿ ಕೃತಕ ನೆರೆ ಉಂಟಾಗಿತ್ತು. ನಗರಸಭೆ ಪೌರ ಕಾರ್ಮಿಕರು ಹೂಳು ತೆರವು ಮಾಡಿ ಮಳೆ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಕಲ್ಪಿಸಿದರು. ಈ ಸಂದರ್ಭ ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್ ಸ್ಥಳಕ್ಕೆ ಭೇಟಿ ನೀಡಿದರು.