ಪುತ್ತೂರು: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನ ಪ್ರಾಯೋಜಕತ್ವದ ಜನನಿ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಪುತ್ತೂರು ಇದರ ಗ್ರಾಮ ಕಾರ್ಯವ್ಯಾಪ್ತಿಗೆ ಸಂಬಂಧಿಸಿ ಮೂವರು ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ.
ನೈತಾಡಿ ಧನಲಕ್ಷ್ಮೀ ಸಂಕೀರ್ಣದಲ್ಲಿ ಜು. 4ರಂದು ನಡೆದ ಜನನಿ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಇದರ ಆಡಳಿತ ಮಂಡಳಿ ನಿರ್ದೇಶಕರ ಸಾಮಾನ್ಯ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ. ಕೋಡಿಂಬಾಡಿ, ಬೆಳ್ಳಿಪ್ಪಾಡಿ, ನೆಕ್ಕಿಲಾಡಿ ಮತ್ತು ಉಪ್ಪಿನಂಗಡಿ ಗ್ರಾಮಗಳನ್ನೊಂಡ ಕಾರ್ಯವ್ಯಾಪ್ತಿಗೆ ಶಶಿಧರ್ ಗೌಡ ನೆಕ್ಕಿಲಾಡಿ, ಸರ್ವೆ ಗ್ರಾಮ ವ್ಯಾಪ್ತಿಗೆ ಉಮೇಶ್ ಸುವರ್ಣ ಸೊರಕೆ, ಮುಂಡೂರು ಗ್ರಾಮ ವ್ಯಾಪ್ತಿಗೆ ಸದಾಶಿವ ಪಟ್ಟೆ ಅವರನ್ನು ಕಂಪನಿಯ ಎಲ್ಲಾ ನಿರ್ದೇಶಕರ ವತಿಯಿಂದ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಕಂಪೆನಿಯ ಆಡಳಿತ ನಿರ್ದೇಶಕರಾದ ಅರುಣ್ ಕುಮಾರ್ ಪುತ್ತಿಲ, ಕಂಪನಿಯ ಮುಂದಿನ ಕಾರ್ಯಚಟುವಟಿಕೆಗಳು ಮತ್ತು ಸವಲತ್ತುಗಳ ಕುರಿತು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ನಿರ್ದೇಶಕರಾದ ಬಾಲಚಂದ್ರ ಕಡ್ಯ, ಮೋನಪ್ಪ ಎ, ಲೀಲಾವತಿ, ಮಂಜುನಾಥ್ ಶೇಖ, ಸುಧಾಕರ ಕುಲಾಲ್ ಮತ್ತು ಗುರುವ ಮರಿಕೆ ಉಪಸ್ಥಿತರಿದ್ದರು. ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಪ್ರೀತ್ ಕುಮಾರ್ ಬಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಂಪೆನಿಯ ಸ್ಥಳೀಯ ಸಂಪನ್ಮೂಲಾಧಿಕಾರಿ ರಿತೀಶ್ ಕುಮಾರ್ ಕೆಮ್ಮಾಯಿ ವಂದಿಸಿದರು.