ಪುತ್ತೂರು; ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ರಾಧಾಕೃಷ್ಣ ಗೌಡ ಎಂಬವರ ಮನೆಯ ಕಾಂಕ್ರೀಟ್ ತಡೆಗೋಡೆ ಜು.6ರಂದು ರಾತ್ರಿ ಕುಸಿದು ಬಿದ್ದು ಅಪಾರ ಹಾನಿ ಉಂಟಾಗಿರುವುದಲ್ಲದೆ ಕುಡಿಯುವ ನೀರಿನ ಬಾವಿ ಸಂಪೂರ್ಣವಾಗಿ ಮುಚ್ಚಿಹೋಗಿದೆ.
ಎಡೆಬಿಡದೆ ಸುರಿದ ಮಳೆಯಿಂದಾಗಿ ಮೇಲ್ಬಾಗದಲ್ಲಿ ಉಂಟಾದ ನೀರಿನ ಒರತೆಯಿಂದಾಗಿ ಸುಮಾರು 60 ಮೀಟರ್ ಉದ್ದ ಕಾಂಕ್ರೀಟ್ ತಡೆಗೋಡೆ ಸಂಪೂರ್ಣವಾಗಿ ಜರಿದುಬಿದ್ದಿದೆ. ಘಟನೆಯಿಂದ ಮನೆಯ ಕುಡಿಯುವ ನೀರಿನ ಬಾವಿ ಸಂಪುರ್ಣವಾಗಿ ಮಣ್ಣಿನಡಿಯಲ್ಲಿ ಸಿಲುಕಿ ಮುಚ್ಚಿ ಹೋಗಿದೆ. ಹಲವು ಅಡಿಕೆ ಮರಗಳಿಗೂ ಹಾನಿಯುಂಟಾಗಿದೆ. ಹಾನಿಯಿಂದಾಗಿ ಸುಮಾರು ರೂ.15 ಲಕ್ಷ ನಷ್ಟ ಉಂಟಾಗಿದೆ.