ಪುತ್ತೂರು : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದಾರಂದಕುಕ್ಕು ನಿವಾಸಿ ಗೀತಮ್ಮ ಪ್ರಭು ಎಂಬವರ ಕೊಟ್ಟಿಗೆ ಕುಸಿತಗೊಡು ಹಾನಿ ಉಂಟಾಗಿದೆ. ಘಟನಾ ಸ್ಥಳಕ್ಕೆ ಕೋಡಿಂಬಾಡಿ ಗ್ರಾ.ಪಂ. ಸದಸ್ಯ ಜಯಪ್ರಕಾಶ್ ಬದಿನಾರು, ಕೋಡಿಂಬಾಡಿ ಗ್ರಾಮ ಲೆಕ್ಕಿಗರಾದ ಶರಣ್ಯ ಹಾಗೂ ಗ್ರಾಮಕರಣಿಕ ವೀರಪ್ಪರವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.