ನೆಲ್ಯಾಡಿ: ಕಡಬ ತಾಲೂಕಿನ ಕುಂತೂರು ಗ್ರಾಮದ ಅರ್ಬಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನ್ನಛತ್ರ ನಿರ್ಮಾಣದ ಬಗ್ಗೆ ಮನವಿ ಪತ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರಾದ ಕೃಷಕುಮಾರ್ ಅತ್ರಿಜಾಲು, ಕಾರ್ಯದರ್ಶಿ ಪ್ರವೀಣ ಆಳ್ವ, ಖಜಾಂಜಿ ಲೋಕೇಶ್ ಗೌಡ, ಸಮಿತಿ ಸದಸ್ಯರಾದ ಬಾಬು ನಾಯ್ಕ, ಅಶೋಕ ಗಾಣಾಜಾಲು, ಸುಗುಣ, ಚೆನ್ನಕೇಶವ ರೈ ಗುತ್ತುಪಾಲು, ಉಮೇಶ್ ಶೆಟ್ಟಿ ಬಾಲಾಜೆ, ಸೋಮಪ್ಪ ಗೌಡ ಎರ್ಮಾಲ, ಶ್ರೀನಾಥ್ ಕೇವಳ, ಧನಂಜಯ ಗೌಡ ಅರ್ಬಿ, ಇಂಜಿನೀಯರ್ ವಿಜಯ ಪಾಲಾರ್ ಉಪಸ್ಥಿತರಿದ್ದರು.