ಪುತ್ತೂರು : ಕರ್ನಾಟಕ ರಾಜ್ಯ ಪಾನೀಯ ನಿಗಮ ಪುತ್ತೂರು ಮಳಿಗೆಯ ಆವರಣದಲ್ಲಿ ಜು.21ರಂದು ಅವಧಿ ಮೀರಿದ ಒಟ್ಟು 07 ಪೆಟ್ಟಿಗೆಯ 11 ಬಾಟಲ್ ಬೀರ್ ಹಾಗೂ 08 ಪೆಟ್ಟಿಗೆಯ 20 ಬಾಟಲ್ ಹಳೆಯ ಮದ್ಯದ ದಾಸ್ತಾನುಗಳನ್ನು ಅಬಕಾರಿ ಉಪ ಆಯುಕ್ತರು ದ.ಕ.ಜಿಲ್ಲೆ ಇವರ ಆದೇಶದಂತೆ ನಾಶಪಡಿಸಲಾಯಿತು. ಅಬಕಾರಿ ಉಪ ಅಧೀಕ್ಷಕ ಅಶೋಕ್ ಎ. ಪೂಜಾರಿ, ಅಬಕಾರಿ ನಿರೀಕ್ಷಕಿ ಸುಜಾತಾ ಎ., ಪಾನೀಯ ನಿಗಮದ ವ್ಯವಸ್ಥಾಪಕ ಎಸ್.ಜಿ. ಜಗದೀಶ್, ಮೇಲ್ವಿಚಾರಕ ಅಯ್ಯನಗೌಡರ್ ಆರ್.ವಿ. ಹಾಗೂ ಅಬಕಾರಿ ಪೇದೆ ಯಲ್ಲಪ್ಪ ಉಪಸ್ಥಿತರಿದ್ದರು.