ಪುತ್ತೂರು: ಷಣ್ಮುಖ ಯುವಕ ಮಂಡಲ ಸರ್ವೆ ಇದರ ವತಿಯಿಂದ ಆ.18ರಂದು ಭಕ್ತಕೋಡಿಯಲ್ಲಿ ನಡೆಯುವ 21ನೆಯ ವರ್ಷದ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಯುವಕ ಮಂಡಲದ ಗೌರವ ಸಲಹೆಗಾರರಾದ ಶಶಿಧರ್ ಎಸ್ ಡಿ ಹಾಗೂ ಶ್ರೀನಿವಾಸ್ ಎಚ್ ಬಿ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಯುವಕ ಮಂಡಲದ ಅಧ್ಯಕ್ಷ ಗೌತಮ್ ರಾಜ್ ಕರಂಬಾರು, ಕಾರ್ಯದರ್ಶಿ ಮನೋಜ್ ಸುವರ್ಣ ಸೊರಕೆ, ಖಜಾಂಚಿ ಗುರುರಾಜ್ ಪಟ್ಟೆಮಜಲು,
ಪದಾಧಿಕಾರಿಗಳಾದ ನಂದನ್ ಕೆ, ಅಶೋಕ್ ಎಸ್ ಡಿ, ಹರೀಶ್ ಆಲೇಕಿ, ನಾಗೇಶ್ ಪಟ್ಟೆಮಜಲು, ಗೌತಮ್ ಪಟ್ಟೆಮಜಲು, ಪ್ರಮೋದ್ ಕುಮಾರ್ ಆಲೇಕಿ, ಜಯರಾಜ್ ಸುವರ್ಣ ಸೊರಕೆ, ಜಯಂತ ಎಸ್ ಡಿ, ಯೋಗೀಶ್ ಮಡಿವಾಳ ಕಲ್ಪಣೆ, ಸುರೇಶ್ ಆಚಾರ್ಯ ಭಕ್ತಕೋಡಿ, ಶಿವಪ್ರಸಾದ್ ಅಲೇಕಿ, ಜಯಪ್ರಕಾಶ್ ಅಲೇಕಿ, ಉಮೇಶ್ ಎಸ್ ಡಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಮಣ್ಣ ಪೂಜಾರಿ ಭಕ್ತಕೋಡಿ, ಸುಬ್ರಹ್ಮಣ್ಯ ಕರಂಬಾರು, ಸುರೇಶ್ ಎಸ್ ಡಿ, ರಾಜೇಶ್ ಎಸ್ ಡಿ, ಶರೀಫ್ ಎಸ್ ಎಂ, ಕಮಲೇಶ್ ಎಸ್ ಡಿ, ತಿಲಕ್ ರಾಜ್ ಕರಂಬಾರು ಉಪಸ್ಥಿತರಿದ್ದರು.