ವಿವೇಕಾನಂದ ಕ.ಮಾ.ಶಾಲೆಯಲ್ಲಿ ಭಗವದ್ಗೀತಾ ಪಠನಾಭ್ಯಾಸ ತರಗತಿ ಉದ್ಘಾಟನೆ

0

ಪುತ್ತೂರು : ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಂಸ್ಕೃತ ಭಾಷಾ ಸಂಘ ಸುರಭಿ ವತಿಯಿಂದ ಆಯೋಜಿಸಲಾದ ಭಗವದ್ಗೀತಾ ಪಠನಾಭ್ಯಾಸದ ತರಗತಿ ಉದ್ಘಾಟನೆ ನಡೆಯಿತು. ವಿಘ್ನೇಶ್ ಭಟ್ ಉದ್ಘಾಟಿಸಿ ಮಾತನಾಡಿ ಸಂಸ್ಕೃತ ಭಾಷೆ ಪ್ರಾಚೀನ ಹಾಗೂ ವೈಜ್ಞಾನಿಕ ಭಾಷೆಯಾಗಿದ್ದು ಎಳವೆಯಿಂದಲೇ ಸಂಸ್ಕೃತ ಭಾಷಾಭ್ಯಾಸ ಸಂಸ್ಕೃತಿ-ಸಂಸ್ಕಾರವನ್ನು ಮೂಡಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು. ದೀಪ ಪ್ರಜ್ವಲನೆ, ಪುಷ್ಪಾರ್ಚನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಸಂಸ್ಕೃತ ಭಾಷಾ ಸಂಘದ ಸಂಯೋಜಕಿ ಉಮಾಮೋಹನ್ ಸಂಘಟಿಸಿದರು.

LEAVE A REPLY

Please enter your comment!
Please enter your name here