ಭಾಲಾವಲಿಕಾರ್ ಗೌಡ ಸಾರಸ್ವತ ಭ್ರಾಹ್ಮಣ ಸಮಾಜ ಸೇವಾ ಸಂಘ ವತಿಯಿಂದ ಮಹಿಳೆಯರಿಗಾಗಿ ಆರಿ ಎಂಬ್ರಾಯ್ಡರಿ ತರಬೇತಿಯ ದರ್ಬೆಯ ಸಚ್ಚಿದಾನಂದ ಸೇವಾ ಸದನ ದಲ್ಲಿ ಆರಂಭಗೊಂಡಿತು. ಸಂಘದ ಕಾರ್ಯದರ್ಶಿ ಮಲ್ಲಿಕಾ ಕುಕ್ಕಾಡಿ ತರಬೇತಿ ಯನ್ನು ಉದ್ಘಾಟಿಸಿ ಶುಭಹಾರೈಸಿದರು. ಸಮಿತಿಯ ಕೋಶಾಧಿಕಾರಿ ರಮೇಶ್ ಪ್ರಭು ಸಂಪ್ಯ ಮತ್ತು ತರಬೇತುದಾರರಾದ ವಿಶಾಲಾಕ್ಷಿ ನಾಯಕ್ ಉಪಸ್ಥಿತರಿದ್ದರು. ವಿಶಾಲಾಕ್ಷಿ ನಾಯಕ್ ಸ್ವಾಗತಿಸಿ , ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ ಎಂ ಪುಂಡಿಕಾಯಿ ವಂದಿಸಿದರು .