ವಿಟ್ಲ: ಜೋಕಾಲಿಯ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕಿಯೋರ್ವರು ಮೃತಪಟ್ಟ ಘಟನೆ ಅನಂತಾಡಿ ಗ್ರಾಮದ ಬಂಟ್ರಿಂಜ ಎಂಬಲ್ಲಿ ನಡೆದಿದೆ.
ಬಂಟ್ರಿಂಜ ನಿವಾಸಿ ಶೇಖರರವರ ಪುತ್ರಿ, ಬಾಬನಕಟ್ಟೆ ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿ ಲಿಖಿತಾ (11 ವ.) ರವರು ಮೃತ ದುರ್ದೈವಿ. ಆ.8ರಂದು ಲಖಿತಾ ಶಾಲೆಗೆ ತೆರಳದೆ ಮನೆಯಲ್ಲಿದ್ದರು. ಮನೆಯಲ್ಲಿ ಮಗಳು ಜೋಕಾಲಿಯಾಡುತ್ತಿದ್ದು, ತಾಯಿ ಚಂದ್ರಾವತಿರವರು ಮನೆ ಪಕ್ಕದ ಅಂಗಡಿಗೆ ಹೋಗಿ ಮರಳಿ ಬಂದು ನೋಡಿದಾಗ . ಲಿಖಿತಾ ಕುತ್ತಿಗೆಗೆ ಜೋಕಾಲಿ ಹಗ್ಗ ಸುತ್ತಿ ನೇತಾಡುತ್ತಿದ್ದನ್ನು ಕಂಡು ಬೊಬ್ಬೆ ಹಾಕಿದರು. ನೆರೆಕರೆಯವರು ಬಂದು ಜೋಕಾಲಿಯ ಸೀರೆಯಿಂದ ಲಖಿತಾರನ್ನು ಬಿಡಿಸಿದರು. ಆದರೆ ಆ ವೇಳೆಗಾಗಲೆ ಬಾಲಕಿ ಮೃತಪಟ್ಟಿದ್ದರು.ಸ್ಥಳಕ್ಕೆ ತೆರಳಿದ ವಿಟ್ಲ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಬಾಲಕಿಯ ತಂದೆ ಶೇಖರರವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.