ವಿಟ್ಲ: ಪ್ರಯಾಣಿಕರನ್ನು ಹತ್ತಿಸುವ ವಿಚಾರವಾಗಿ ಬಸ್ಸು ಹಾಗೂ ಸರ್ವೀಸ್ ಕಾರು ಚಾಲಕರ ಮಧ್ಯೆ ಮಾತಿನ ಚಕಮಕಿ ನಡೆದ ಘಟನೆ ವಿಟ್ಲದ ಖಾಸಗಿ ಬಸ್ಸು ನಿಲ್ದಾಣದಲ್ಲಿ ನಡೆದಿದೆ.
ಕನ್ಯಾನಕ್ಕೆ ತೆರಳುವ ಬಸ್ಸು, ನಿಲ್ದಾಣದಲ್ಲಿದ್ದ ವೇಳೆ ಕನ್ಯಾನ ಕಡೆಗೆ ತೆರಳುವ ಸರ್ವಿಸ್ ಕಾರು ಚಾಲಕರೋರ್ವರು ಜನರನ್ನು ಹತ್ತಿಸುತ್ತಿದ್ದುದೇ ಮಾತಿನ ಚಕಮಕಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಿಂದಾಗಿ ಅಲ್ಪ ಹೊತ್ತು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳದಲ್ಲಿ ಜನ ಜಮಾವಣೆ ಅಗಿದ್ದರು. ಸ್ಥಳಕ್ಕಾಗಮಿಸಿದ ವಿಟ್ಲ ಠಾಣಾ ಪೊಲೀಸರು ಇತ್ತಂಡಗಳವರನ್ನು ಸಮಾಧಾನಿಸಿ ಕಳುಹಿಸಿದ್ದಾರೆ.