ಕೊಣಾಜೆ: ಸಂಬಂಧಿಕನಿಂದ ಹಲ್ಲೆ – ಮಹಿಳೆ ಪುತ್ತೂರು ಆಸ್ಪತ್ರೆಗೆ ದಾಖಲು

0

ಪುತ್ತೂರು:ಸಂಬಂಧಿಕನೋರ್ವನಿಂದ ಹಲ್ಲೆಗೊಳಗಾಗಿ ಗಾಯಗೊಂಡಿರುವ ಮಹಿಳೆ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಕಡಬ ತಾಲೂಕಿನ ಕೊಣಾಜೆ ಶಿರಾಡಿಯ ಕೊಡಿಂಕಲ್ ನಿವಾಸಿ ಗಣೇಶ್ ಪೂಜಾರಿ ಎಂಬವರ ಪತ್ನಿ ಸಾರಿಕಾ(57ವ)ರವರು ಹಲ್ಲೆಗೊಳಗಾದವರು.ಸಾರಿಕಾ ಅವರ ತಲೆಗೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ ಗಾಯವಾಗಿದೆ.ನಾನು ನನ್ನ ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ನನ್ನ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿದ ಬಿಜೆಪಿ ಮುಖಂಡ ಬಾಲಕೃಷ್ಣ ಬಾಣಜಾಲು ಅವರು ನನಗೆ ಕತ್ತಿಯಿಂದ ತಲೆಗೆ ಹಲ್ಲೆ ನಡೆಸಿದ್ದಾರೆ.ಅವರ ಜೊತೆಗಿದ್ದ ಗೋಪಾಲ ಪೂಜಾರಿ ಅವರು ನನ್ನ ಹೊಟ್ಟೆ, ತೊಡೆಗೆ ತುಳಿದಿದ್ದಾರೆ¿ ಎಂದು ಸಾರಿಕಾ ಆರೋಪಿಸಿದ್ದಾರೆ.ಜಮೀನಿನ ವಿಚಾರದಲ್ಲಿ ಈ ಹಲ್ಲೆ ನಡೆದಿದೆ ಎನ್ನಲಾಗಿದೆ.ಘಟನೆಯ ಕುರಿತು ಪ್ರತಿಕ್ರಿಯೆಗಾಗಿ ಬಾಲಕೃಷ್ಣ ಬಾಣಜಾಲು ಅವರಿಗೆ ಕರೆ ಮಾಡಲಾಯಿತಾದರೂ ಸಂಪರ್ಕ ಸಾಧ್ಯವಾಗಲಿಲ್ಲ.ಉಪ್ಪಿನಂಗಡಿ ಪೊಲೀಸರು ಆಸ್ಪತ್ರೆಗೆ ತೆರಳಿ ಗಾಯಾಳು ಮಹಿಳೆಯ ಹೇಳಿಕೆ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here