ಯಕ್ಷಗಾನ ಕಲಾವಿದ ಶಂಭುಕುಮಾರ್ ಆತ್ಮಹತ್ಯೆ

0

ಪುತ್ತೂರು : ಯಕ್ಷಗಾನ ಕಲಾವಿದರೊಬ್ಬರು ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡ ಘಟನೆ ಕಟೀಲು ಸಮೀಪ ಉಲ್ಲಂಜೆ ಎಂಬಲ್ಲಿ ನಡೆದಿದೆ. ಅತ್ಮಹತ್ಯೆ ಮಾಡಿಕೊಂಡ ಯಕ್ಷಗಾನ ಕಲಾವಿದರನ್ನು ಕೊಡೆತ್ತೂರು ನಿವಾಸಿ ಶಂಭುಕುಮಾರ್ (48ವ.)ಎಂದು ಗುರುತಿಸಲಾಗಿದೆ. ಪುತ್ತೂರು, ಬಪ್ಪನಾಡು ಹಾಗೂ ಕಟೀಲು ಮೇಳಗಳಲ್ಲಿ ಕಳೆದ ಹಲವು ವರ್ಷಗಳಿಂದ ಕಲಾವಿದರಾಗಿ ಸೇವೆ ಸಲ್ಲಿಸಿದ್ದ ಇವರು ಹಳೆಯಂಗಡಿ ಸಮೀಪದ ಹೊಯಿಗೆಗುಡ್ಡೆ ಉಮಾಮಹೇಶ್ವರ ದೇವಸ್ಥಾನದ ಹೆಸರಿನಲ್ಲಿ ಚಿಕ್ಕ ಮೇಳವೊಂದನ್ನು ನಡೆಸುತ್ತಿದ್ದರು. ಅರ್ಥಿಕ ಸಮಸ್ಯೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

 

 

 

LEAVE A REPLY

Please enter your comment!
Please enter your name here