ಮಾಧವ ಶಿಶು ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ

0

ಉಪ್ಪಿನಂಗಡಿ: ಇಲ್ಲಿನ ವೇದಶಂಕರ ನಗರದಲ್ಲಿರುವ ಶ್ರೀ ಮಾಧವ ಶಿಶು ಮಂದಿರದಲ್ಲಿ ಗುರುವಾರ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿಯಲ್ಲಿ ನೂರಾರು ಸಂಖ್ಯೆಯ ಶ್ರೀ ಕೃಷ್ಣ ವೇಷಧಾರಿ ಮಕ್ಕಳು ಭಾಗವಹಿಸಿದರು.

ಶ್ರೀಮತಿ ರತ್ನ ಬೊಳ್ಳಾರ್ ರವರಿಂದ ದೀಪ ಪ್ರಜ್ವಲನೆಗೊಂಡು ಚಾಲನೆ ಪಡೆದ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ, ಯಶೋಧಾ ವೇಷಧಾರಿ ಮಕ್ಕಳ ಮಡಿಕೆ ಒಡೆಯುವ ಕಾರ್ಯಕ್ರಮ, ಮಕ್ಕಳು ಮಹಿಳೆಯರು , ಪುರುಷರಾದಿಯಾಗಿ ವಿವಿಧ ಸ್ತರದಲ್ಲಿ ಮಡಿಕೆ ಒಡೆಯುವ ಸ್ಪರ್ಧೆ ನಡೆಯಿತು.

ಕಾರ್ಯಕ್ರಮದಲ್ಲಿ ವಿವೇಕಾನಂದ ಪ್ರಭು, ವಂದನಾ ಶರತ್, ಚಂದಪ್ಪ ಮೂಲ್ಯ, ಉಮೇಶ್ ಶೆಣೈ, ಆನಂದ ಕುಂಟಿನಿ, ಏಕ ವಿದ್ಯಾಧರ ಜೈನ್ , ರಾಮಚಂದ್ರ ಮಣಿಯಾಣಿ, ಜಯಂತ ಪೊರೋಳಿ, ಕಂಗ್ವೆ ವಿಶ್ವನಾಥ ಶೆಟ್ಟಿ, ಯು. ರಾಜೇಶ್ ಪೈ, ರಾಕೇಶ್ ಶೆಟ್ಟಿ, ಲೋಕೇಶ್ ಆಚಾರ್ಯ, ಸುಧಾಕರ ಶೆಟ್ಟಿ, ಸುಬ್ರಹ್ಮಣ್ಯ ಶೆಣೈ, ಹರಿರಾಮಚಂದ್ರ, ಜಯಶ್ರೀ ಜನಾರ್ದನ್ , ಸುಜಾತ ಕೃಷ್ಣ ಆಚಾರ್ಯ, ಶ್ಯಾಮಲಾ ಶೆಣೈ , ಚಂದ್ರಶೇಖರ್ ಮಡಿವಾಳ, ಬಾಲಕೃಷ್ಣ ರೈ, ಯತೀಶ್ ಶೆಟ್ಟಿ, ಮನೋಜ್ ಶೆಟ್ಟಿ, ಮಾಧವ ಆಚಾರ್ಯ ಶೋಭಾ ದಯಾನಂದ್ ಮತ್ತಿತರರು ಭಾಗವಹಿಸಿದರು.

LEAVE A REPLY

Please enter your comment!
Please enter your name here