ಮುಂಡೂರು ಒಕ್ಕಲಿಗ ಸ್ವ-ಸಹಾಯ ಸಂಘ ರಚನೆ

0

ಪುತ್ತೂರು : ಮುಂಡೂರು ಗ್ರಾಮದ ತೌಡಿಂಜ ಬಾಳಪ್ಪ ಗೌಡರ ಮನೆಯಲ್ಲಿ ತೃಪ್ತಿ ಒಕ್ಕಲಿಗ ಸ್ವ- ಸಹಾಯ ಸಂಘ ದಿ.21ರಂದು ಉದ್ಘಾಟಿಸಲಾಯಿತು. ಹಿರಿಯರಾದ ವೆಂಕಮ್ಮ ತೌಡಿಂಜರವರು ದೀಪ ಪ್ರಜ್ವಲಿಸುವ ಮೂಲಕ ಸಂಘ ಉದ್ಘಾಟಿಸಿ ಶುಭಹಾರೈಸಿದರು.

ಸಂಘದ ಅಧ್ಯಕ್ಷ ಮುಂಡೂರು ಗ್ರಾ.ಪಂ.ಸದಸ್ಯೆ ಕಾವ್ಯ ತೌಡಿಂಜ, ಕಾರ್ಯದರ್ಶಿಯಾಗಿ ವನಿತಾ ಡಿ. ತೌಡಿಂಜ, ಸದಸ್ಯರಾಗಿ ಪುಷ್ಪ ಎಮ್., ಕವಿತಾ ಕೆ., ರಂಜಿನಿ, ಮೀನಾಕ್ಷಿ, ವಾಣಿಶ್ರೀ ಎ, ದೇವಕಿ, ಪುಷ್ಪಾವತಿ, ಹರಿಣಾಕ್ಷಿ, ರಿಷಿತಾ ಕೆ, ನಯನ, ಶರಣ್ಯ, ದ್ಯುತೀಶ್ ಸೇರ್ಪಡೆಯಾದರು. ಮುಂಡೂರು ಒಕ್ಕಲಿಗ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಗಂಗಾಧರ ಗೌಡ ಭಕ್ತಕೋಡಿ ಸಭಾ ನಡಾವಳಿ ಪುಸ್ತಕ ಹಸ್ತಾಂತರ ಮಾಡಿದರು. ಒಕ್ಕೂಟದ ಕಾರ್ಯದರ್ಶಿ ಮೋಹಿನಿ ಕುಶಾಲಪ್ಪ ಗೌಡ ಅಂಬಟ, ವಲಯ ಪ್ರೇರಕಿ ನಮಿತಾ ಗೌಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here