ಉಪ್ಪಿನಂಗಡಿ ಮಾಂಡೋವಿ ಮೋಟಾರ್‍ಸ್‌ನಿಂದ ಶ್ರೀಧರ್ಮಸ್ಥಳ ಶಾಂತಿವನ ಟ್ರಸ್ಟ್‌ಗೆ ಇಕೋ ಕಾರಿನ ಕೀ ಹಸ್ತಾಂತರ

0

ಉಪ್ಪಿನಂಗಡಿ: ಮಾಂಡೋವಿ ಮೋಟಾರ್‍ಸ್ ವತಿಯಿಂದ ಧರ್ಮಸ್ಥಳ ಶಾಂತಿವನ ಟ್ರಸ್ಟ್‌ಗೆ ಹೊಸ ಇಕೋ ಕಾರಿನ ಕೀ ಹಸ್ತಾಂತರಿಸಲಾಯಿತು. ಶ್ರೀ ಧರ್ಮಸ್ಥಳ ಸಂಸ್ಥೆಯ ಹಲವಾರು ಮಾರುತಿ ಸುಝುಕಿ ಕಾರುಗಳನ್ನು ಮಾಂಡೋವಿ ಮೋಟಾರ್‍ಸ್‌ನಿಂದ ಹಲವು ವರ್ಷಗಳಿಂದ ಖರೀದಿಸುತ್ತಾ ಬಂದಿದ್ದು ಆ. 24ರಂದು ಹೊಸ ಇಕೋ ಕಾರನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಶ್ರೀ ವೀರೇಂದ್ರ ಹೆಗ್ಗಡೆಯವರ ಮುಖಾಂತರ ಶಾಂತಿವನ ಟ್ರಸ್ಟ್ ಸಂಸ್ಥೆಗೆ ಕೀಳಿಕೈ ಕೊಡುವುದರ ಮೂಖಾಂತರ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಾಂಡೋವಿ ಮೋಟಾರ್‍ಸ್‌ನ ಟ್ರೂವ್ಯಾಲ್ಯೂ ವಿಭಾಗದ ಸೀನಿಯರ್ ಮ್ಯಾನೆಜರ್ ಅಕ್ಷಯ್ ಜೈ, ಫೈನಾನ್ಸ್ ವಿಭಾಗದ ಮ್ಯಾನೇಜರ್ ಸುಪಾರ್ಶ್ವ ಶೆಟ್ಟಿ, ಗ್ರಾಮೀಣ ವಿಭಾಗದ ಮ್ಯಾನೇಜರ್ ಸುಜಿತ್ ಕುಮಾರ್ ಮತ್ತು ಸೇಲ್ಸ್ ಆಫೀಸರ್ ಚರಣ್‌ಕುಮಾರ್ ಬಿ.ಎಂ ಅವರು ಉಪಸ್ಥಿತರಿದ್ದರು.
ಡಾ|| ವೀರೇಂದ್ರ ಹೆಗ್ಗಡೆಯವರು ರಾಜ್ಯಸಭಾ ಸದಸ್ಯರಾದ ಹಿನ್ನಲೆಯಲ್ಲಿ ಮಾಂಡೋವಿ ಮೋಟಾರ್‍ಸ್ ವತಿಯಿಂದ ಅಭಿನಂದಿಸಿ ಅವರ ಆಶೀರ್ವಾದ ಪಡೆಯಲಾಯಿತು.

LEAVE A REPLY

Please enter your comment!
Please enter your name here