ಕೊಡಿಪ್ಪಾಡಿ ಲಕ್ಷ್ಮೀ ಕೊಳಕ್ಕಿಮಾರ್‌ರವರ ಶ್ರದ್ಧಾಂಜಲಿ ಸಭೆ

0

ಪುತ್ತೂರು : ಕೊಡಿಪ್ಪಾಡಿ ಕೊಳಕ್ಕಿಮಾರ್ ದಿ.ರಾಮಣ್ಣ ನಾಯ್ಕ್ ರವರ ಪತ್ನಿ ಲಕ್ಷ್ಮೀ ಕೊಳಕ್ಕಿಮಾರ್‌ರವರ ಉತ್ತರಕ್ರಿಯಾದಿ ಸದ್ಗತಿ ಕಾರ್ಯಕ್ರಮ ಹಾಗೂ ಶ್ರದ್ದಾಂಜಲಿ ಸಭೆ ಆ.28ರಂದು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಪರಿವಾರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ.ಪಿ ನುಡಿನಮನ ಸಲ್ಲಿಸಿದರು. ಬಳಿಕ ಲಕ್ಷ್ಮೀ ಕೊಳಕ್ಕಿಮಾರ್‌ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಮೃತರ ಪುತ್ರರಾದ ವಿಜಯ ಬ್ಯಾಂಕ್‌ನ ನಿವೃತ್ತ ಮ್ಯಾನೆಜರ್ ರಾಧಾಕೃಷ್ಣ ನಾಯ್ಕ್ ಕೊಳಕ್ಕಿಮಾರ್, ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ-ಓಪರೇಟಿವ್‌ನ ಪುತ್ತೂರು ಶಾಖಾ ವ್ಯವಸ್ಥಾಪಕ ಮನೋಹರ್ ನಾಯ್ಕ್ ಕೊಳಕ್ಕಿಮಾರ್, ಪುತ್ರಿಯರಾದ ಗಿರಿಜಾ ರಾಮಣ್ಣ ನಾಯ್ಕ್ ಬೆಳ್ಳರ್ಕಜೆ, ಕುಸುಮಾ ಸುಂದರ ನಾಯ್ಕ್ ವಿರಾಜ್‌ಪೇಟೆ, ಗುಲಾಬಿ ಮೋಹನ್, ಅಳಿಯ ಮೋಹನ್ ನಾಯ್ಕ್ ಮಂಗಳೂರು, ಸೊಸೆಯಂದಿರಾದ ಸಬಿತಾ ರಾಧಾಕೃಷ್ಣ ನಾಯ್ಕ್, ಪ್ರಫುಲ್ಲ ಮನೋಹರ್ ನಾಯ್ಕ್ ಮತ್ತು ಮೊಮ್ಮಕ್ಕಳಾದ ಅಪೂರ್ವ ಸುಜಿತ್, ಅಪೇಕ್ಷಾ ಆಭಿಲಾಷ್, ಅದ್ವಿತ್, ಅಶ್ವಿಜ, ಮಣಿಕಂಠ, ಸ್ವರ್ಣ ವಸಂತ್, ರಜನಿ ಗಣೇಶ್, ಸರೋಜ ರಮೇಶ್, ರವಿಸಂಪತ್, ಶಿಲ್ಪಾ ಬಿಮಲ್,ಪ್ರಶಾಂತ್, ಚೈತ್ರ ಗಿರೀಶ್, ಅದೇಶ್ ಹಾಗೂ ಮರಿಮಕ್ಕಳು ಹಾಗೂ ಬಂಧು ಬಳಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here