ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ: ಇಂದ್ರಪ್ರಸ್ಥ ವಿದ್ಯಾಲಯಕ್ಕೆ ರನ್ನರ್ ಆಪ್ ಪ್ರಶಸ್ತಿ

0

ಉಪ್ಪಿನಂಗಡಿ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಮಕುಂಜದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ 14ರ ವಯೋಮಾನದ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ ಬಾಲಕರ ತಂಡವು ರನ್ನರ್ ಆಫ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ತಂಡದಲ್ಲಿ 7ನೇ ತರಗತಿಯ ಚಿಂತನ್ ಕೆ.ಸಿ,‌ ಕವೀಶ್, ಸಮೃದ್ಧ್ ರೈ, ಅಕ್ಷಯ್ ಕೆ. ಎಸ್, ಶ್ರೀಹಾನ್, ಕೌಶಲ್, ಮೊಹಮ್ಮದ್ ಅರ್ಫಾದ್, ಇಮಾಮ್ ಅಹಮದ್, 6ನೇ ತರಗತಿಯ ಸಮೃಧ್ಧ್ ಜೈನ್, ಆಯತ್ತುಲ್ಲಾ ಸಲೀಂ, ಜಿತೇಶ್ ಎಸ್. ವಿ, ಶ್ರೇಯಸ್ಸ್  ಭಾಗವಹಿಸಿದ್ದರು. ಏಳನೇ ತರಗತಿಯ ಚಿಂತನ್ ಕೆ ಸಿ ಅತ್ಯುತ್ತಮ ಸವ್ಯಸಾಚಿ ಆಟಗಾರರಾಗಿ, ಎಂಟನೇ ತರಗತಿಯ ಆಕಾಶ್ ಜಿಲ್ಲಾ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಸಂಸ್ಥೆಯ ದೈಹಿಕ  ಶಿಕ್ಷಣ ಶಿಕ್ಷಕ ಗೋಪಿನಾಥ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ  ಶ್ರೀ ರಂಜಿನಿ ತರಬೇತಿ ನೀಡಿರುತ್ತಾರೆ ಎಂದು ಸಂಸ್ಥೆಯ ಮುಖ್ಯಸ್ಥರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here