ಸಚಿವ ಉಮೇಶ್ ಕತ್ತಿ, ಹಿರೇಬಂಡಾಡಿ ಬಿಜೆಪಿ ಮುಖಂಡ ಯಶವಂತ ಸರೋಲಿಯವರಿಗೆ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ

0

ಪುತ್ತೂರು: ಅರಣ್ಯ,ಆಹಾರ ಮತ್ತು ನಾಗರೀಕ ಖಾತೆ ಇಲಾಖೆಯ ಸಚಿವ ಉಮೇಶ್ ಕತ್ತಿ ಹಾಗು ಹಿರೇಬಂಡಾಡಿ ಬಿಜೆಪಿ ಮಾಜಿ ಶಕ್ತಿ ಕೇಂದ್ರ ಪ್ರಮುಖ ಯಶವಂತ ಸರೋಲಿ ನಿಧನಕ್ಕೆ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಶ್ರದ್ದಾಂಜಲಿ ಸಭೆ ನಡೆಯಿತು.
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ನುಡಿನಮನ ಸಲ್ಲಿಸಿದರು. ನಗರ ಸಭೆ ಅಧ್ಯಕ್ಷ ಕೆ ಜೇವಂದರ್ ಜೈನ್, ನಗರ ಸಭೆ ಉಪಾಧ್ಯಕ್ಷ  ವಿದ್ಯಾ ಗೌರಿ, ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಮುಂಗ್ಲಿಮನೆ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ಜಿಲ್ಲಾ ಸಮಿತಿ ಸದಸ್ಯ ಸುರೇಶ್ ಆಳ್ವ, ವಿಶ್ವಾನಾಥ್ ಕುಲಾಲ್, ಗ್ರಾಮಾಂತರ ಮಂಡಲದ ಒಬಿಸಿ ಮೋರ್ಚಾದ ಅಧ್ಯಕ್ಷ ಸುನಿಲ್ ದಡ್ಡು, ನಗರ ಒಬಿಸಿ ಮೋರ್ಚಾದ ಅಧ್ಯಕ್ಷ ಶಿವರಾಮ ಸಫಲ್ಯ ಹಾಗು ಗ್ರಾಮಾಂತರ ಮತ್ತು ನಗರ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here