ಕಡಬ ವೃತ್ತಮಟ್ಟದ ಕಬಡ್ಡಿ ಪಂದ್ಯಾಟ: ಬಾಲಕರ ವಿಭಾಗದಲ್ಲಿ ಆಲಂಕಾರು ಭಾರತಿ ಶಾಲಾ ತಂಡ ಪ್ರಥಮ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಸೆ.೯ರಂದು ನಡೆದ ಪ್ರಾಥಮಿಕ ಶಾಲಾ ಬಾಲಕ ಹಾಗೂ ಬಾಲಕಿಯರ ವಿಭಾಗದ ಕಡಬ ವೃತ್ತಮಟ್ಟದ ಕಬಡ್ಡಿ ಪಂದ್ಯಾಟದ ಬಾಲಕರ ವಿಭಾಗದಲ್ಲಿ ಆಲಂಕಾರು ಶ್ರೀ ಭಾರತಿ ಶಾಲಾ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.


ಭಾರತಿ ಶಾಲಾ ತಂಡದ ಸಂದೇಶ ಕಕ್ವೆ ಉತ್ತಮ ರೈಡರ್ ಆಗಿ ಹಾಗೂ ಪವನ್ ಹಳೆನೇರೆಂಕಿ ಉತ್ತಮ ಡಿಫೆಂಡರ್ ಪ್ರಶಸ್ತಿ ಪಡೆದುಕೊಂಡರು. ವಿಜೇತ ತಂಡಕ್ಕೆ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಇಂದುಶೇಖರ ಶೆಟ್ಟಿ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ಕಾರ್ಯದರ್ಶಿ ಸೇಸಪ್ಪ ರೈ ರಾಮಕುಂಜ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಿ.ಎಲ್,ಜನಾರ್ದನ, ದೈಹಿಕ ಶಿಕ್ಷಣ ಶಿಕ್ಷಕಿ ಪ್ರೇಮಾ, ಆಲಂಕಾರು ಶ್ರೀ ಭಾರತಿ ಶಾಲಾ ಆಡಳಿತ ಮಂಡಳಿಯ ಸದಸ್ಯ ಮಲ್ಲೇಶ್ ಆಲಂಕಾರು, ಭಾರತಿ ಶಾಲಾ ಕಬಡ್ಡಿ ತಂಡದ ತರಬೇತುದಾರ ಸಂತೋಷ್, ಚಂದ್ರಹಾಸ ಕೆ.ಸಿ, ಶಿಕ್ಷಕಿ ಆಶಾ, ಪೋಷಕರಾದ ಚಂದ್ರಶೇಖರ ಅಂಗಡಿಜಾಲು, ಗಣೇಶ್ ಹಿರಿಂಜ, ಕೇಶವ ಪಲ್ಲತಡ್ಕ, ಶಿವಾನಂದ ಶರವೂರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here