ಕುಟ್ರುಪ್ಪಾಡಿ: ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ

0

ನೆಲ್ಯಾಡಿ: ಡಿಕೆಆರ್‌ಡಿಎಸ್ ಬೆಳ್ತಂಗಡಿ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಜೀವಜ್ಯೋತಿ ಮಹಾಸಂಘ ಕುಟ್ರುಪ್ಪಾಡಿ ಇದರ ನೇತೃತ್ವದಲ್ಲಿ ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿತೆ ಕಾರ್ಯಕ್ರಮ ಸೆ.೯ರಂದು ಕುಟ್ರುಪ್ಪಾಡಿ ಚರ್ಚ್ ಹಾಲ್‌ನಲ್ಲಿ ನಡೆಯಿತು.


ಆರೋಗ್ಯ ಅಧಿಕಾರಿ ಶಿಲ್ಪಾರವರು ಮಾಹಿತಿ ನೀಡಿದರು. ಸಂಘದ ಅಧ್ಯಕ್ಷೆ ಲಿಸ್ಸಿ ಮ್ಯಾಥ್ಯು ಅಧ್ಯಕ್ಷತೆ ವಹಿಸಿದ್ದರು. ಸಂಘದ ಸದಸ್ಯರಿಂದ ಸೊಪ್ಪು ತರಕಾರಿ ಬಳಸಿದ ಆಹಾರ ಪದಾರ್ಥಗಳ ಪ್ರಾತ್ಯಕ್ಷಿತೆ ನಡೆಯಿತು. ಕಾರ್ಯಕರ್ತೆ ಸುಶೀಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ನೇಹ ಸಂಘದ ಸದಸ್ಯೆ ವಲ್ಸಮ್ಮ ಸ್ವಾಗತಿಸಿ, ಐಶ್ವರ್ಯ ಸಂಘದ ಸದಸ್ಯೆ ಮೇರಿ ಪಿ.ಜೆ.ವಂದಿಸಿದರು. ಸೌಭಾಗ್ಯ ಸಂಘದ ಸದಸ್ಯೆ ವಲ್ಸಮ್ಮ ಎ.ಜೆ.ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here